ಅರಣ್ಯ ವನ್ಯಜೀವಿ
ಬಾಲಕನನ್ನು ಬಲಿ ಪಡೆದ ನರಭಕ್ಷಕ ಹುಲಿ ಸೆರೆ
ಬಾಲಕ ಚರಣ್ ನಾಯಕ್ ನನ್ನು ಬಲಿ ತೆಗೆದುಕೊಂಡಿದ್ದ ನರಭಕ್ಷಕ ಗಂಡು ಹುಲಿ ಸೆರೆ

ಹೆಚ್.ಡಿ.ಕೋಟೆ,ಸೆ 20: ಸೆ 4 ರಂದು ಎಚ್.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ ರೈತ ಕೃಷ್ಣನಾಯಕ ಮತ್ತು ಮಾದೇವಿ ಬಾಯಿ ಎಂಬವರ ಪುತ್ರ ಚರಣ್ ನಾಯಕ್ ಎಂಬ ಬಾಲಕನನ್ನು ಬಲಿಪಡೆದ ನರಭಕ್ಷಕ ಹುಲಿಯನ್ನು ಸೆರೆಹಿಡಿಯಲಾಗಿದೆ.
7 ರಿಂದ 8 ವರ್ಷದ ಹುಲಿಯನ್ನು ಮಂಗಳವಾರ ಸಂಜೆ 7-20ರ ಸಮಯದಲ್ಲಿ, ಕಲ್ಲಟಿ ಗ್ರಾಮದ ತಾವರೆ ನಾಯಕ ಎಂಬುವರ ಜಮೀನಿನ ಬಳಿ ಅರವಳಿಕೆ ವೈದ್ಯರಾದ ಡಾ,:ರಮೇಶ್, ರಂಜನ್ ಇವರುಗಳು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹುಲಿಗೆ ಅರವಳಿಕೆ ಹೊಡೆದು ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಯಶಸ್ವಿಯಾಗಿದ್ದಾರೆ.