ಕ್ರೈಂ
ಪ್ರೇಮ ಪ್ರಕರಣ: ಪ್ರೇಯಸಿ ಸೇರಿದಂತೆ ಇಬ್ಬರಿಗೆ ಚಾಕು ಇರಿದ ಪ್ರಿಯಕರ-ನೋಡಿ ವಿಡಿಯೊ
ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಘಟನೆ

ಕುಶಾಲನಗರ, ಆ 13:ತ್ರಿಕೋನ ಪ್ರೇಮ ಪ್ರಕರಣ ಹಿನ್ನಲೆಯಲ್ಲಿ ಓರ್ವ ಯುವಕ ಪ್ರೇಯಸಿ ಸೇರಿದಂತೆ ಆತನೊಂದಿಗಿದ್ದ ಮತ್ತಿಬ್ಬನಿಗೆ ಚಾಕು ಇರಿದ ಘಟನೆ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ.

ಹಲ್ಲೆಗೊಳಗಾದ ಇಬ್ಬರು ಕುಶಾಲನಗರದ ಸರಕಾರಿ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಚಾಕು ಇರಿದ ಯುವಕ ಕುಶಾಲನಗರದ ಹೋಟೆಲ್ ಸಪ್ಲೆಯರ್ ದೊಡ್ಡಹರವೆ ಗ್ರಾಮದ ವಿಜಯ್ ಎಂದು ತಿಳಿದುಬಂದಿದೆ.




