ಕುಶಾಲನಗರ, ಫೆ 08: ಗುಂಡು ಹೊಡೆದುಕೊಂಡು ನಿವೃತ್ತ ಅರಣ್ಯಾಧಿಕಾರಿ ಆತ್ಮಹತ್ಯೆಗೆ ಶರಣಾದ ಘಟನೆ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಬಸವನತ್ತೂರಿನಲ್ಲಿ ನಡೆದಿದೆ. ಟಿ.ವಿ.ಶಶಿ (80) ಆತ್ಮಹತ್ಯೆಗೆ ಶರಣಾದವರು.
ಅನಾರೋಗ್ಯ ಹಿನ್ನಲೆ ರಿವಾಲ್ವರ್ ನಿಂದ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಡಗಿನ ವಿವಿಧೆಡೆ ರೇಂಜರ್ ಆಗಿ ಶಶಿಧರ್ ಸೇವೆ ಸಲ್ಲಿಸಿದ್ದರು.
ನಿದ್ರಾಹೀನತೆ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಡೆತ್ ನೋಟ್ ಪತ್ತೆಯಾಗಿದೆ.
Back to top button
error: Content is protected !!