ಟ್ರೆಂಡಿಂಗ್

ಸೆಂಟ್ರಿಂಗ್ ಕೆಲಸದ ವೇಳೆ ಕೆಳಗೆ ಬಿದ್ದು ಕಟ್ಟಡ ಕಾರ್ಮಿಕ ದುರ್ಮರಣ

ಕುಶಾಲನಗರ, ಡಿ. 04: ಹೊಸ ಮನೆ‌ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಟ್ಟಡ‌ ಕಾರ್ಮಿಕ ಸೆಂಟ್ರಿಂಗ್ ಕೆಲಸದ ವೇಳೆ ಮೂರನೆ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ದುರ್ಮರಣ ಹೊಂದಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಆರ್ ಕೆ ಬಡಾವಣೆಯಲ್ಲಿ ಕೆಲಸ‌ ಮಾಡುತ್ತಿದ್ದ ದೊಡ್ಡಹೊಸೂರು ಗ್ರಾಮದ ಲತೀಫ್ ಖಾನ್ ಎಂಬವರ ಪುತ್ರ ಜಬೀರ್ (42) ಮೃತ ದುರ್ದೈವಿ. ದುರ್ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಿದರೂ‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!