ಪ್ರಕಟಣೆ

ಕೆಸಿಪಿ ಸೂಪರ್ ಮಾರ್ಟ್, ಹಾರ್ಡ್ ವೇರ್ & ಪೇಂಟ್ಸ್, ಟೆಂಡರ್ ಚಿಕನ್ ಸೆಂಟರ್ ಲೋಕಾರ್ಪಣೆ

ಕುಶಾಲನಗರ, ಆ 22: ಕುಶಾಲನಗರದ ಶ್ರೀ ಕೋಣಮಾರಿಯಮ್ಮ ವೃತ್ತದಲ್ಲಿರುವ ‌ಕೆಸಿಪಿ ಆರ್ಕೆಡ್ ನಲ್ಲಿ ನೂತನವಾಗಿ ಶುಭಾರಂಭಗೊಂಡ ಕೆಸಿಪಿ ಸೂಪರ್ ಮಾರ್ಟ್, ಹಾರ್ಡ್ ವೇರ್ & ಪೇಂಟ್ಸ್, ಟೆಂಡರ್ ಚಿಕನ್ ಸೆಂಟರ್ ಲೋಕಾರ್ಪಣೆಗೊಳಿಸಲಾಯಿತು.

ಡಿವೈಎಸ್ಪಿ ಗಂಗಾಧರಪ್ಪ ಅವರು ಸೂಪರ್ ಮಾರ್ಟ್ ಉದ್ಘಾಟಿಸಿದರು. ಹಾರ್ಡ್ವೇರ್ & ಪೇಂಟ್ ಘಟಕವನ್ನು ಎಸ್ ಬಿ ಐ ಶಾಖೆಯ ಸೀನಿಯರ್ ಆಫೀಸರ್ ಮಂಜುನಾಥ್ ಉದ್ಘಾಟಿಸಿದರು. ಚಿಕನ್ ಸೆಂಟರ್ ಅನ್ನು ಕೇಚಪ್ಪನ ಡಾ.ಉದಯಶಂಕರ್ ಅವರು ಉದ್ಘಾಟಿಸಿದರು.

ಈ‌ ಸಂದರ್ಭ ಕೆಸಿಪಿ‌ ಆರ್ಕೆಡ್ ಮಾಲೀಕ ಕೇಚಪ್ಪನ್ ಮೋಹನ್ ಕುಮಾರ್, ಗೌಡ ಸಮಾಜದ ಮಾಜಿ ಅಧ್ಯಕ್ಷ ಕೂರನ ಪ್ರಕಾಶ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಿನ್ನಪ್ಪ, ಗೌಡ ಸಮಾಜದ ಪ್ರಮುಖರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!