ಕ್ರೈಂ

ಕೂಡಲೆ ತೆನ್ನೀರ‌ಮೈನಾ ಬಂಧಿಸಿ: ತಪ್ಪಿದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಎಚ್ಚರಿಕೆ

ಕುಶಾಲನಗರ, ಏ 07: ದಿನಾಂಕ 04/04/2025 ರಂದು ಆತ್ಮಹತ್ಯೆಗೆ ಶರಣಾದ ವಿನಯ್ ಸೋಮಯ್ಯನವರ ಸಾವಿಗೆ ಪ್ರಚೋದನೆ ನೀಡಿದ ತೆನ್ನಿರ ಮೈನ ಮೇಲೆ ಮೊಕದ್ದಮೆ ದಾಖಲಾಗಿ ಮೂರು ದಿನ ಕಳೆದರು, ಅವನ ಬಂಧನಕ್ಕೆ ಕ್ರಮವಹಿಸದ ಪೊಲೀಸ್ ಇಲಾಖೆಯ ನಿರ್ಲಕ್ಷವನ್ನು ಕುಶಾಲನಗರ ಗೌಡ ಯುವಕ ಸಂಘ ತೀವ್ರವಾಗಿ ಖಂಡಿಸಿದೆ. ಈ ಕೂಡಲೇ ಅವರ ಬಂಧನವಾಗದಿದ್ದಲ್ಲಿ ಕೊಡಗು ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು, ವಿನಯ್ ಸೋಮಯ್ಯನವರಿಗೆ ಮಾನಸಿಕ ಹಿಂಸೆ ನೀಡಿ ಅವರ ಸಾವಿಗೆ ಕಾರಣರಾದವರ ಮೇಲೆ ಮತ್ತು ಅದರ ಹಿಂದಿರುವ ಶಕ್ತಿಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಳ್ಳುವಂತೆ ಸಂಘ ಈ ಮೂಲಕ ಆಗ್ರಹಿಸಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us