ಕುಶಾಲನಗರ ಫೆ. 18 : ಭಾರತ ನೀತಿ ಆಯೋಗದ ಮೂಲಕ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮತ್ತು ಕಾರ್ಯಚರಣೆ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಕುಶಾಲನಗರ ತಾಲ್ಲೂಕು ಕೂಡುಮಂಗಳೂರು ಗ್ರಾಮದ ರೇಷ್ಮೆ ಇಲಾಖೆಯ ನಿವೃತ್ತ ಅಧಿಕಾರಿ ಎಂ.ಎಸ್ ಮಹೇಶ್ ನೇಮಕಗೊಂಡಿರುತ್ತಾರೆ.
ದೆಹಲಿಯ ಭಾರತ ನೀತಿ ಆಯೋಗದ ಮೂಲಕ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮತ್ತು ಕಾರ್ಯಚರಣಾ ಸಮಿತಿ ನೇಮಕ ಮಾಡಿದೆ.
ಉಪಾಧ್ಯಕ್ಷರುಗಳಾಗಿ ನಿವೃತ್ತ ಪ್ರೌಢಶಾಲಾ ಶಿಕ್ಷಕ ಎಂ. ರಂಗಸ್ವಾಮಿ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಹೆಚ್. ಎನ್. ಸುಬ್ರಹ್ಮಣ್ಯ, ನಿವೃತ್ತ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೆ.ಜಿ. ಮೋಹನ್, ಜಿಲ್ಲಾ ಮಹಾ ಕಾರ್ಯದರ್ಶಿ ಯಾಗಿ ಪಿ.ಎಸ್. ಜನಾರ್ದನ್ ನೇಮಕಗೊಂಡಿರುತ್ತಾರೆ.
ಕುಶಾಲನಗರ ತಾಲ್ಲೂಕು ಅಧ್ಯಕ್ಷರಾಗಿ ನಿವೃತ್ತ ಅಂಚೆ ಇಲಾಖೆ ನೌಕರ ಗುರುಪಾದ ಸ್ವಾಮಿ ನೇಮಕಗೊಂಡಿರುತ್ತಾರೆ ಎಂದು ಜಿಲ್ಲಾಧ್ಯಕ್ಷ ಎಂ.ಎಸ್. ಮಹೇಶ್ ತಿಳಿಸಿದ್ದಾರೆ.
Back to top button
error: Content is protected !!