ಕಾರ್ಯಕ್ರಮ

ಬ್ಯಾಡಗೊಟ್ಟ ಪುನರ್ವಸತಿ ಶಿಬಿರದಲ್ಲಿ ರಕ್ಷಾಬಂಧನ ಕಾರ್ಯಕ್ರಮ

ಕುಶಾಲನಗರ, ಸೆ 01: ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಶಿಬಿರದಲ್ಲಿ ವನವಾಸಿ ಕಲ್ಯಾಣ ವೇದಿಕೆ ಆಶ್ರಯದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ರಾಜ್ಯ ವನವಸಿ ಕಲ್ಯಾಣದ ಅಧ್ಯಕ್ಷ ಚೆಕ್ಕೇರಾ ಮನು ಕಾವೇರಪ್ಪ ಮತ್ತು ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಬಿರದ 50 ಕ್ಕೂ ಅಧಿಕ ಮಂದಿ ನಿವಾಸಿಗಳಿಗೆ ರಾಖಿ ಕಟ್ಟಿ, ಸಿಹಿ ಹಂಚಿ ರಕ್ಷಾಬಂಧನ್ ಆಚರಿಸಲಾಯಿತು. ಈ ಸಂದರ್ಭ ವೇದಿಕೆ ತಾಲೂಕು ಅಧ್ಯಕ್ಷ ಸಿದ್ದಣ್ಣ, ಕಾರ್ಯದರ್ಶಿ ಹರ್ಷ ಎಂ ಬಿ, ಖಜಾಂಚಿ ಅನಿಶ್ ಖಜಾಂಚಿ, ತಾಲ್ಲೂಕು ಪ್ರಚಾರ ಪ್ರಮುಖ ಸತೀಶ್, ತಾಲ್ಲೂಕು ಸಹ ಪ್ರಚಾರಕ ರಮೇಶ್ ಬೊಟ್ಟುಮನೆ, ತಾಲ್ಲೂಕು ವ್ಯವಸ್ಥಾಪಕ ಮಹೇಂದ್ರ, ತಾಲ್ಲೂಕು ವಿಸ್ತರಕ ಸಚಿನ್‌ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!