ಕುಶಾಲನಗರ, ಸೆ 01: ಕುಶಾಲನಗರ-ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಚಲಿಸುತ್ತಿದ್ದ ವಾಹನದ ಮೇಲೆ ಮರವೊಂದು ಬಿದ್ದ ಘಟನೆ ನಡೆದಿದೆ.
ಕರ್ನಾಟಕ ಕಾವಲುಪಡೆಯ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಅವರು ಮಡಿಕೇರಿಯಿಂದ ಕುಶಾಲನಗರದತ್ತ ಆಗಮಿಸುತ್ತಿದ್ದ ಸಂದರ್ಭ ರಸ್ತೆ ಬದಿಯಲ್ಲಿದ್ದ ಕಾಡು ಮರ ನೆಲಕ್ಕುರುಳಿದೆ. ಮರದ ಒಂದು ಭಾಗ ಕೃಷ್ಣ ಅವರ ಆಲ್ಟೋ ಕಾರ್ ಮೇಲೆ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನೊಳಗಿದ್ದ ಕೃಷ್ಣ ಅವರ ಬೆನ್ನು, ಕೈ ಭಾಗಕ್ಕೆ ಘಾಸಿ ಉಂಟಾಗಿದೆ.
Back to top button
error: Content is protected !!