ಕುಶಾಲನಗರ, ಸೆ 01: ಓಣಂ ಹಬ್ಬದ ಅಂಗವಾಗಿ ಕುಶಾಲನಗರದ ವಿದ್ಯಾರ್ಥಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿದ್ಯಾರ್ಥಿ ತಂಡಗಳಿಗೆ ಪೂಕಳಂ ಮತ್ತು ಒಲೆ ರಹಿತ ತಿನಿಸು ತಯಾರಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾವೇರಿ ಟೆಕ್ಸಟೈಲ್ ಮಾಲೀಕರಾದ ಹೆಚ್.ಕೆ. ಸತೀಶ್ ಮತ್ತು ಶೋಭಾ ಸತೀಶ್, ಕಾವೇರಿ ಫೈನಾಸ್ಸಿನ ಕೆ.ಕೆ ಪುಪ್ಪವೇಣಿ, ಖುಷಿ ಬ್ಯುಟಿಪಾರ್ಲರ್ ಮಾಲೀಕರಾದ ಕೆ.ಎಲ್ ಖುಷಾಲಿ ಮತ್ತು ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಕೆ.ಬಿ. ಬಿಂದು ಭಾಗವಹಿಸಿದ್ದರು.
ಉಪನ್ಯಾಸಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Back to top button
error: Content is protected !!