ಟ್ರೆಂಡಿಂಗ್

ದುಷ್ಕರ್ಮಿಗಳಿಂದ ಹಲಸಂಡೆ ಫಸಲು ಬಳ್ಳಿ ಹಾನಿ

ಕುಶಾಲನಗರ, ಏ 05: ಭುವನಗಿರಿ ರಸ್ತೆಯಲ್ಲಿರುವ ಟಿ.ಕೆ.ನಾರಾಯಣ ಎಂಬವರಿಗೆ ಸೇರಿದ ಕೃಷಿ ಭೂಮಿಯಲ್ಲಿ ಯುವ ರೈತ ಮಂಜುನಾಥ್ ಹಾಗೂ ಕೃಷಿಕ ಮಹಿಳೆ ರುಕ್ಮಿಣಿ ಎಂಬವರು ಒಂದೂವರೆ ಎಕರೆ ಹೊಲದಲ್ಲಿ ಬೆಳೆದಿದ್ದ ತರಕಾರಿ ಕಾಯಿ ಪಲ್ಯೆ ಹಲಸಂಡೆ ಫಸಲು ಭರಿತ ಬಳ್ಳಿಗಳನ್ನು ದುಷ್ಕರ್ಮಿಗಳು ತುಂಡರಿಸಿ ಹಾನಿ ಮಾಡಿರುವ ಘಟನೆ ನಡೆದಿದೆ.
ಬೇಸಗೆಯ ದಿನಗಳಲ್ಲಿ ಅಂರ್ಜಲ ಬರಿದಾದರೂ ಕೂಡ ಕಷ್ಟಪಟ್ಟು ಬೆಳೆದ ಹಲಸಂಡೆ ಫಸಲು ಬರುವುದನ್ನೇ ಕಾದಿದ್ದ ದುರುಳರು ಸುಮಾರು ಕಾಲು ಎಕರೆಯಷ್ಟು ಫಸಲು ಭರಿತ ಬಳ್ಳಿಗಳನ್ನು ತುಂಡರಿಸಿದ ಪರಿಣಾಮ ಬಳ್ಳಿಗಳು ನೆಲಕ್ಕುರುಳಿವೆ.
ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಗೆ ರೈತ ಮಹಿಳೆ ರುಕ್ಮಿಣಿ ದೂರು ನೀಡಿದ್ದು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ನಷ್ಟ ಕಟ್ಟಿಸಿಕೊಡಬೇಕೆಂದು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us