ಪ್ರತಿಭಟನೆ

ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ತೆರೆದಿದ್ದ ಮದ್ಯದಂಗಡಿಗೆ ಬೀಗ

ಮದ್ಯದಂಗಡಿ ತೆರವಿಗೆ ಆಗ್ರಹಿಸಿ‌ ಪ್ರತಿಭಟನೆ ನಡೆಸಲಾಗಿತ್ತು

ಕುಶಾಲನಗರ, ಜು 27: ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ತೆರೆದಿದ್ದ ಮದ್ಯದಂಗಡಿಗೆ ಬೀಗ ಜಡಿಯಲಾಗಿದೆ. ಬಾರ್ ವಿರುದ್ಧ ಸುಂದರನಗರದ ಸಣ್ಣ ಕೈಗಾರಿಕಾ ಸಂಘದಿಂದ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಾರ್ ಅನ್ನು ಮುಚ್ಚಲಾಗಿದೆ.

ಕಳೆದ 20 ದಿನಗಳಿಂದ ನಿರಂತರವಾಗಿ ವಿವಿಧ ಸಂಬಂಧಿತ ಇಲಾಖೆಗಳಿಗೆ ಆಕ್ಷೇಪಣೆ ಕಳುಹಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಈ ಕ್ರಮಕೈಗೊಂಡಿದೆ. ಸುದೀಪ್ ಕುಮಾರ್ ಬಿ ಕೆ (ಕೈಲಾಸಾ ಕಮೋಡಿಟೀಸ್), ವಿಮಲ್ ನಾಯರ್ (ಭಗವತಿ ಎಂಜಿನಿಯರಿಂಗ್ ವರ್ಕ್ಸ್) ಅವರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!