ಕುಶಾಲನಗರ, ಅ 16: ವಾಸವಿ ಯುವತಿಯರ ಸಂಘದ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಬೊಂಬೆಗಳನ್ನು ಜೋಡಿಸಲಾಗಿದೆ.
ಈ ಬಾರಿ ವಿಶೇಷವಾಗಿ ಚಂದ್ರಯಾನ -3 ಯಶಸ್ವಿಯಾದ ನೆನಪಿಗಾಗಿ ಚಂದ್ರಯಾನದ ಪ್ರತಿಕೃತಿಯೊಂದಿಗೆ ದಸರಾ ಗೊಂಬೆಗಳನ್ನು ಜೋಡಿಸಲಾಗಿದೆ.
ಹತ್ತು ದಿನಗಳ ಕಾಲ ಗೊಂಬೆಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ವಾಸವಿ ಯುವತಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಕವಿತಾ ಪ್ರವೀಣ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ ಎಲ್ ಉದಯ್ ಕುಮಾರ್, ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್, ಯುವಜನ ಸಂಘದ ಅಧ್ಯಕ್ಷೆ ಪ್ರವೀಣ್ ಕೆ, ಬಾಲಕಿಯರ ಸಂಘದ ಅಧ್ಯಕ್ಷೆ ಕುಮಾರಿ ಸ್ಪೂರ್ತಿ,
ನಿಕಟ ಪೂರ್ವ ಅಧ್ಯಕ್ಷೆ ಪ್ರತಿಮಾ ರಾಘವೇಂದ್ರ ಉಪಾಧ್ಯಕ್ಷೆ ಕುಮಾರಿ ರಕ್ಷಾ , ನಿರ್ದೇಶಕರಗಳಾದ ಶ್ರಾವಣಿ ಭಗವಾನ್, ನಿಶಾಂತಿ ರಾಘವೇಂದ್ರ, ಶ್ರೀಮತಿ ಸಹನಾ ನಾಗಶರಣ್,
ಸಲಹಾ ಸಮಿತಿ ಸದಸ್ಯರಾದ ಶ್ರೀಮತಿ ಕನ್ನಿಕಾ ನಾಗ್ ಮತ್ತು ಇತರರಿದ್ದರು.
Back to top button
error: Content is protected !!