ಪ್ರಕಟಣೆ

15 ರಿಂದ ಹುದುಗೂರಿನಲ್ಲಿ ನವರಾತ್ರಿ ಪೂಜ್ಯೋತ್ಸವ, ಮೃತ್ಯುಂಜಯ ಹೋಮ

ಕುಶಾಲನಗರ ಅ 12: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ಶ್ರೀ ಮಹಾದೇವಿ ಸನ್ನಿಧಿಯಲ್ಲಿ 15 ರಿಂದ 23 ರ ವರೆಗೆ ನವರಾತ್ರಿ ಪೂಜ್ಯೋತ್ಸವ ಕಾರ್ಯಕ್ರಮವು ನಡೆಯಲಿದೆ.

ಇದರ ಅಂಗವಾಗಿ ದೇವಾಲಯ ಆವರಣದಲ್ಲಿ ಪ್ರತಿ ದಿನ ಸಂಜೆ 7 ಗಂಟೆಯಿಂದ 8 ಗಂಟೆಯವರೆಗೆ ಭಕ್ತ ವೃಂದದವರ ಸಹಕಾರದೊಂದಿಗೆ ಲಲಿತಾ ಸಹಸ್ರನಾಮ ಪಾರಾಯಣದೊಂದಿಗೆ ಕುಂಕುಮಾರ್ಚನೆ ನಡೆಯುವುದು ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ದಿನಂಪ್ರತಿ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವು ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಟಿ. ಎಂ. ಚಾಮಿ ತಿಳಿಸಿದ್ದಾರೆ.

17 ರಂದು ಮೃತ್ಯುಂಜಯ ಹೋಮ:

ದಿನಾಂಕ 17 ರಂದು ಮೃತ್ಯುಂಜಯ ಹೋಮ ಮತ್ತು ಚಂಡಿಕಾ ಹೋಮ ನಡೆಯಲಿದೆ.

ಇದರ ಅಂಗವಾಗಿ 17 ರ ಬೆಳಿಗ್ಗೆ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದ ನಂತರ ಮೃತ್ಯುಂಜಯ ಹೋಮ, ಚಂಡಿಕಾಹೋಮ, ವಿವಿಧ ಬಗೆಯ ಪೂಜಾ ಕಾರ್ಯಕ್ರಮಗಳ ನಂತರ ಸಂಕಲ್ಪ ಹೋಮ ಸೇರಿದಂತೆ ಹಲವು ಪೂಜಾ ಕಾರ್ಯಗಳು, ಮಹಾಮಂಗಳಾರತಿ, ಅಗಮಿಸುವ ಭಕ್ತಾದಿಗಳಿಗೆ ಮಧ್ಯಾಹ್ನ ಮತ್ತು ಸಂಜೆ ದೇವಾಲಯ ಸಮಿತಿಯ ವತಿಯಿಂದ ಅನ್ನ ಸಂತಪರ್ಣೆ ಕಾರ್ಯ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!