ಕುಶಾಲನಗರ, ನ 01: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡಾಂಬೆಯ ಧ್ವಜಾರೋಹಣವನ್ನು ಕುಶಾಲನಗರದ ಹಿರಿಯ ಉದ್ಯಮಿ ಡಿ.ಎಸ್.ಜಗದೀಶ್ ನೆರವೇರಿಸಿ ಶುಭಾಶಯ ಹೇಳಿದರು.
ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು. ಕನ್ನಡ ಸಂಸ್ಕ್ರತಿ ಹಾಗು ಕನ್ನಡ ಶಾಲೆಗಳು ಉಳಿಯಬೇಕಾದರೆ ಪ್ರತಿ ಮನೆ ಮನಗಳಲ್ಲಿ ಕನ್ನಡದ ದೀಪ ಬೆಳಗಿಸಬೇಕಿದೆ. ಕನ್ನಡ ಶಾಲೆಗಳನ್ನು ಉಳಿಸುವ ಮೂಲಕ ಕನ್ನಡ ಸಾಹಿತ್ಯ ಹಾಗು ಸಂಸ್ಕ್ರತಿಯನ್ನು ಉಳಿಸಬೇಕೆಂದು ಕರೆಕೊಟ್ಟರು.
ಕುಶಾಲನಗರದ ಹಿರಿಯ ಸಾಹಿತಿ ಬಿ.ಆರ್.ನಾರಾಯಣ ಶುಭ ಕೋರಿದರು.
ಈ ಸಂದರ್ಭ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ, ಪರಿಷತ್ತಿನ ತಾಲ್ಲೂಕು ಗೌರವ ಕಾರ್ಯದರ್ಶಿ ಎಸ್.ನಾಗರಾಜು, ಮಂಜು ಭಾರ್ಗವಿ, ಕೋಶಾಧಿಕಾರಿ ಕೆ.ವಿ.ಉಮೇಶ್, ನಿರ್ದೇಶಕರಾದ ಹೇಮಲತಾ, ಟಿ.ವಿ.ಶೈಲಾ, ಕಾಮಾಕ್ಷಿ ಬೋರೇಗೌಡ, ಎಂ.ಎನ್.ಕಾಳಪ್ಪ, ವೈ.ಟಿ.ಪರಮೇಶ್ ಇದ್ದರು.
Back to top button
error: Content is protected !!