ಕುಶಾಲನಗರ, ನ 01: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು.
ಯುವಕ ಸಂಘದ ಅಧ್ಯಕ್ಷ ಸುನಿಲ್ ಅಧ್ಯಕ್ಷತೆಯಲ್ಲಿ ಸರಕಾರಿ ಶಾಲೆ ಬಳಿ ಪುನಿತ್ ರಾಜ್ ಕುಮಾರ್ ವೃತ್ತ ಹಾಗೂ ಪುತ್ಥಳಿಯನ್ನು ಸಾಹಿತಿ ಕಣಿವೆ ಭಾರದ್ವಜ್ ಉದ್ಘಾಟಿಸಿದರು.
ಯುವಕ ಸಂಘದ ಸದಸ್ಯ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಭಾಸ್ಕರ್ ನಾಯಕ್, ತಾಪಂ ಮಾಜಿ ಸದಸ್ಯ ಡಿ.ಎಸ್. ಗಣೇಶ್, ಸದಸ್ಯರಾದ ದಿನೇಶ್, ಮಣಿಕಂಠ, ಭಾಗ್ಯ, ಖತಿಜಾ ಇಬ್ರಾಹಿಂ, ಪಾರ್ವತಮ್ಮ, ಪತ್ರಕರ್ತ ಕೆ.ಕೆ.ನಾಗರಾಜಶೆಟ್ಟಿ, ಎ.ಎಸ್.ಐ. ವಿಠಲ, ಪೊಲೀಸ್ ಸಿಬ್ಬಂದಿ ಗುಣ, ಸ್ಥಳೀಯ ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಗ್ರಾಪಂ ಮಾಜಿ ಸದಸ್ಯ ಕುಮಾರಸ್ವಾಮಿ, ಗ್ರಾಮದ ಮುಖಂಡ ಹೊನ್ನಣ್ಣ, ಡೇವಿಡ್, ಜಯಣ್ಣ ಯುವಕ ಸಂಘದ ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ಕೃಷ್ಣಕಾಂತ್, ಖಜಾಂಚಿ ಶ್ರೀನಿವಾಸ್, ಸಹ ಕಾರ್ಯದರ್ಶಿ ಕೋಮಲೇಶ್, ಸದಸ್ಯರಾದ ಅನುಕುಮಾರ್, ಸಚಿನ್, ರಜಿತ್, ಮೋನೇಶ್, ದಿಲೀಪ್ ಮತ್ತಿತರರು ಇದ್ದರು.
ಸ್ಥಳೀಯ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.
Back to top button
error: Content is protected !!