ಯುವ ಉದ್ಯಮಿ, ಕುಶಾಲನಗರ ಜೇಸಿಯ ಪೂರ್ವಾಧ್ಯಕ್ಷ ಹಾಗೂ ವಲಯ ನಿರ್ದೇಶಕ ಪ್ರಶಾಂತ್ ರವರಿಗೆ ಜೇಸಿ ಭಾರತ ನೀಡುವ ರಾಷ್ಟ್ರೀಯ ಕಮಲಪತ್ರ ಪ್ರಶಸ್ತಿ ಪ್ರದಾನ
ಕುಶಾಲನಗರ, ಅ 29:ಸಮಾಜಮುಖಿ ಸೇವೆಗಾಗಿ ಯುವ ಸಾಧಕರಿಗೆ ಜೇಸಿಐ ಭಾರತ ನೀಡುವ ನೀಡುವ ರಾಷ್ಟ್ರೀಯ ಕಮಲಪತ್ರ ಪ್ರಶಸ್ತಿ ಯನ್ನು ಮೈಸೂರಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಉದ್ಯಮಿ, ಕುಶಾಲನಗರ ಜೇಸಿಯ ಪೂರ್ವಾಧ್ಯಕ್ಷ ಹಾಗೂ ವಲಯ ನಿರ್ದೇಶಕ ಪ್ರಶಾಂತ್ ಪಡೆದರು.ಇಂದು ಮೈಸೂರಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ನಡೆದ ಜೇಸಿ ವಲಯ 14ರ ವಲಯ ಸಮ್ಮೇಳನದಲ್ಲಿ ಜೆಸಿಐ ಪೂರ್ವ ರಾಷ್ಟಾಧ್ಯಕ್ಷ TVN ಮೂರ್ತಿ, ಜೆಸಿಐ ರಾಷ್ಟ್ರ ಉಪಾಧ್ಯಕ್ಷ ವಿಕಾಸ್ ಗೂಗ್ಲಿಯ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ನವೀನ್ ವಿಸ್ಕಿತ್, ವಲಯಧ್ಯಕ್ಷ ಕುನಲ್ ಮಾಣಕ್ಚಂದ್ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಾಂತ್ ರವರು ಹಲವಾರು ವರ್ಷಗಳಿಂದ ಯುವ ಉದ್ಯಮಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಹಲವಾರು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೆಸಿಐ ಕುಶಲನಗರ ಕಾವೇರಿಯ ಪೂರ್ವಧ್ಯಕ್ಷರಾಗಿ ಹಾಗೂ ಜೆಸಿಐ ವಲಯ 14ರ ನಿರ್ದೇಶಕರಾಗಿ ಸೇವೆ ಸಲ್ಲಸಿರುವುದಲ್ಲದೆ ಸಂಸ್ಥೆಯ ಮೂಲಕ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ
Back to top button
error: Content is protected !!