ಸನ್ಮಾನ
ಮಡಿಕೇರಿ ದಸರಾ 2023: ಶಾಸಕ ಮಂತರ್ ಗೌಡ ದಂಪತಿಗೆ ಸನ್ಮಾನ


ಕುಶಾಲನಗರ, ಅ 25: 2023 ನೇ ಸಾಲಿನ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿ ಕೊನೆಯ ದಿನದ ಸಭಾ ಸಮಾರಂಭ ಕಾರ್ಯಕ್ರಮದಲ್ಲಿ ಮಡಿಕೇರಿ ದಸರಾ ಆಚರಣಾ ಸಮಿತಿ ವತಿಯಿಂದ ಯಶಸ್ವಿ ದಸರಾ ಕಾರ್ಯಕ್ರಮಕ್ಕೆ ಪ್ರಮುಖವಾಗಿ ಹಾಗೂ ವೈಯಕ್ತಿಕವಾಗಿ ತನು, ಮನ, ಧನ ಸಹಕರಿಸಿದ ಹಾಗೂ ರಾಜ್ಯ ಸರ್ಕಾರದಿಂದ ಉದ್ದೇಶಿಸಿದ ದಸರಾ ಆರ್ಥಿಕ ಪ್ಯಾಕೆಜ್ ಅನ್ನು ಹೊದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕ ಡಾ. ಮಂತರ್ ಗೌಡ ಮತ್ತು ಅವರ ಧರ್ಮಪತ್ನಿ ದಿವ್ಯ ಮಂತರ್ ಅವರನ್ನು ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾದ ಶ್ರೀ. ಯು.ಟಿ ಖಾದರ್ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ. ಎನ್.ಎಸ್ ಭೋಸ್ ರಾಜು ಹಾಗೂ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.