ಸಭೆ

ಕುಶಾಲನಗರ ಸ.ಮಾ.ಪ್ರಾ ಶಾಲೆ ಶತಮಾನೋತ್ಸವ ಆಚರಣಾ ಸಮಿತಿ ರಚನೆ

ಕುಶಾಲನಗರ, ಮಾ 28: ಕುಶಾಲನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಶತಮಾನ ಕಳೆದಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಣೆಯ ಉದ್ದೇಶಕ್ಕಾಗಿ ನೂತನ ಸಮಿತಿಯನ್ನು ರಚಿಸಲಾಯಿತು.
ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂವತ್ತು ಸದಸ್ಯರ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ವಿ ಪಿ ಶಶಿಧರ್,ಗೌರವಾಧ್ಯಕ್ಷರಾಗಿ ನಿವೃತ್ತ ಶಿಕ್ಷಕರಾದ ನಜೀರ್ ಅಹ್ಮದ್, ಉಪಾಧ್ಯಕ್ಷರಾಗಿ, ಎಂ ವಿ ನಾರಾಯಣ,ಎಂ ಕೆ ದಿನೇಶ್ ಟಿ ಆರ್ ಶರವಣ ಕುಮಾರ್, ಕಾರ್ಯದರ್ಶಿಯಾಗಿ ವಕಿಲರಾದ ಆರ್ ಕೆ ನಾಗೇಂದ್ರ ಬಾಬು, ಖಜಾಂಚಿಯಾಗಿ ಎಸ್ ಕೆ ಸತೀಶ್ ಸಂಚಾಲಕರಾಗಿ ಜೋಸೆಪ್ ಸೋನ್ಸ್ ವಿಕ್ಟರ್, ಸಹ ಕಾರ್ಯದರ್ಶಿ ಎಂ ವಿ ಮೊಯ್ದು, ಮಾಧ್ಯಮ ಕಾರ್ಯದರ್ಶಿಗಳಾಗಿ ಬಿ ಎಸ್ ಲೋಕೇಶ್ ಸಾಗರ್, ಸಹ ಕಾರ್ಯದರ್ಶಿಯನ್ನಾಗಿ ರಾಜಶೇಖರ್
ಹಾಗೂ ವನಿತಾ ಚಂದ್ರಮೋಹನ್, ಸದಸ್ಯರಾಗಿ ವಿ ಡಿ ಪುಂಡರೀಕಾಕ್ಷ ವಿ ಎಸ್,ಆನಂದ ,ಬಿ ಆರ್ ನಾಗೇಂದ್ರ ಪ್ರಸಾದ್, ,ಹೆಚ್ ಟಿ ವಸಂತ್ ,ಚ್ ಎನ್ ಚಂದ್ರು, ಡಿ ವಿ ರಾಜೇಸ್, ಬಿ,ಶಬೀರ್ ಆಹಮದ್ ,ಲತಾ ನಂದಕುಮಾರ್,ವಿಜಯ್ ಕುಮಾರ್,ಬಿ ಎಸ್ ಚಂದನ್,ಇಮ್ಯಾನ್ಯುಯಲ್ ಅಂತೋಣಿ,ಎಂ ಡಿ ರಂಗಸ್ವಾಮಿ,ಶಾಲೆಯ ಮುಖ್ಯೋಪಾಧ್ಯಾಯರು,ಸೇರಿದಂತೆ ಮೂವತ್ತು ಜನರು ಸಮಿತಿಯನ್ನು ರಚಿಸಲಾಯೀತು,ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ವಿ ಪಿ ಶಶಿಧರ್ ರವರು ಜನರಲ್ ಕಾರ್ಯಪ್ಪ, ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ರವರಂತಹ ಮಹನೀಯರನ್ನು ನಾಡಿಗೆ ಕೊಟ್ಟ ಗುರುಕುಲವಿದು,ಈ ಮಹ ವಿದ್ಯಾಸಂಸ್ಥೆಯ ಶತಮಾನೋತ್ಸವ ಆಚರಣೆಯೊಂದಿಗೆ ನವೀನ ರೀತಿಯ ಶತಮಾನೋತ್ಸವ ಕಟ್ಟಡ ನಿರ್ಮಿಸುವ ಕನಸು ನಮ್ಮದು,ಈ ಕಾರ್ಯಕ್ರಮಕ್ಕೆ ಶಾಲೆಯ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಸಹಕರಿಸಿ ಶಾಲೆಯ ಶತಮಾನೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದರು.ಎಸ್ ಕೆ ಶತೀಸ್ ಸ್ವಾಗತಿಸಿದರು, ಶರವಣ ಕುಮಾರ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us