ಕುಶಾಲನಗರ, ಮಾ 19: ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಆಶ್ರಯದಲ್ಲಿ ಏಪ್ರಿಲ್ 26 ಹಾಗೂ 27 ರಂದು ಕುಶಾಲನಗರದ ಜಿ. ಎಂ.ಪಿ ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಇದರ ಅಂಗವಾಗಿ ಬೈಚನಹಳ್ಳಿ ಮುತ್ತಪ್ಪ ದೇವಸ್ಥಾನ ಆವರಣದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಬಿ.ಟಿ. ರಮೇಶ್ ಹಾಗೂ ಅಧ್ಯಕ್ಷರಾದ ಸುಧೀರ್ ಅವರು ಪಂದ್ಯಾವಳಿಯ ಲೋಗೋ ಬಿಡುಗಡೆ ಕಾರ್ಯಕ್ರಮ ನೆರವೇರಿಸಿದರು.
Back to top button
error: Content is protected !!