ಟ್ರೆಂಡಿಂಗ್
ಮಹಾಕಾಳಿ ಖ್ಯಾತಿಯ ಶಾಂತಲ ಅಕ್ಷರ ಶಕ್ತಿ (ಮುಬೀನ್ ತಾಜ್) ನಿಧನ


ಕುಶಾಲನಗರ, ಡಿ 27: ಕುಶಾಲನಗರದ ಮಹಾಕಾಳಿ ಖ್ಯಾತಿಯ ಮುಬೀನ್ ತಾಜ್ (38) ನಿಧನರಾದರು. ಖಾಸಗಿ ವಿದ್ಯಾಸಂಸ್ಥೆ ಮುಖ್ಯಸ್ಥೆಯಾಗಿದ್ದ ಸೋಮವಾರಪೇಟೆಯ ಮುಬೀನ್ ತಾಜ್ ಮಹಾಕಾಳಿ ಆವಾಹನೆಯಾಗಿದೆ, ದೇವಾಲಯ ನಿರ್ಮಿಸಬೇಕಿದೆ ಎಂದು ಹೋರಾಟ ನಡೆಸುತ್ತಿದ್ದರು. ಕುಶಾಲನಗರದ ಬಿಎಂ ರಸ್ತೆ ಹಳೆಯ ವೆಂಕಟೇಶ್ವರ ಥಿಯೇಟರ್ ಬಳಿ ವಾಸವಿದ್ದ ಇವರು ಕುಶಾಲನಗರ ಪುರಸಭೆ ಬಳಿಯಿರುವ ಖಾಸಗಿ ಜಾಗದಲ್ಲಿ ದೇವರ ವಿಗ್ರಹಗಳು ಹುದುಗಿದ್ದು ಇದನ್ನು ಹೊರತೆಗೆಯಬೇಕು ಎಂದು ಹೋರಾಟ ನಡೆಸುತ್ತಿದ್ದರು. ಕಾಳಿ ತನ್ನ ಕನಸಿನಲ್ಲಿ ಬಂದು ಆಜ್ಞಾಪಿಸುತ್ತಿದ್ದಾಳೆ ಎಂದು ಹೇಳುತ್ತಲೇ ಬಂದಿದ್ದ ಮುಬೀನ್ ತಾಜ್ ಅವರ ಮಾತನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಕಾನೂನಾತ್ಮಕವಾಗಿ ಇವರ ಬಯಕೆ ಕೂಡ ಈಡೇರಿಸಲು ಯಾರಿಗೂ ಸಾಧ್ಯವಿರಲಿಲ್ಲ.