ಹುಣಸೂರು ಆ 22: ಮನೆಯ ಆವರಣದ ಹೂವಿನಗಿಡಗಳ ನಡುವೆ ಬೆಳೆದಿದ್ದ ಎರಡು ಗಾಂಜಾ ಗಿಡವನ್ನು ಪತ್ತೆಹಚ್ಚಿರುವ ಗ್ರಾಮಾಂತರ ಠಾಣೆ ಪೊಲೀಸರು ಸುಮಾರು ೬ ಕೆ.ಜಿ. ಎರಡು ಗಾಂಜಾ ಹಸಿ ಗಿಡವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಹುಣಸೂರು ತಾಲೂಕಿನ ತಟ್ಟೆಕೆರೆ ಗ್ರಾಮದ ಲೇ.ಬಸವರಾಜುರ ಪುತ್ರ ವಿಶ್ವನಾಥ್ ಬಂಧಿತ ಆರೋಪಿ.
ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಮಹೇಶ್ ಹಾಗೂ ಇನ್ಸ್ಪೆಕ್ಟರ್ ರವಿ ಮಾರ್ಗದರ್ಶನದಲ್ಲಿ ಎಸ್.ಐ.ರಾಮಚಂದ್ರಪ್ಪ ನೇತೃತ್ವದಲ್ಲಿ ವಿಶ್ವನಾಥನ ದಾಳಿ ಮಾಡಿ ತಪಾಸಣೆ ನಡೆಸಿದ ವೇಳೆ ಆರೋಪಿ ವಿಶ್ವನಾಥನ ಮನೆ ಪಕ್ಕದಲ್ಲಿ ಒಂದು ಹಾಗೂ ಮನೆ ಹಿಂಬಾಗದಲ್ಲಿ ಒಂದು ಗಾಂಜಾ ಗಿಡ ಬೆಳೆದಿರುವುದು ಪತ್ತೆಯಾಗಿದ್ದು, ೫-೬ ಅಡಿ ಎತ್ತರ ಬೆಳೆದಿರುವ ಹಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿ ವಿಶ್ವನಾಥನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮೆಹರಾಜ್, ಮಂಜು, ಇಮ್ರಾನ್, ಚಾಲಕ ಸುಂದರ್ ಮತ್ತಿತರರಿದ್ದರು
Back to top button
error: Content is protected !!