ಕಾರ್ಯಕ್ರಮ

ಮೋಹನ ಕುಮಾರ್ ಗೌಡ ಅವರ 50ನೇ ವರ್ಷದ ಹುಟ್ಟು ಹಬ್ಬ: ಶಾಲಾ ಬ್ಯಾಗ್ ವಿತರಣೆ

ಕುಶಾಲನಗರ, ನ 02: ಕರ್ನಾಟಕ ಕಾವಲುಪಡೆ ರಾಜ್ಯ ಅಧ್ಯಕ್ಷರಾದ ಮೋಹನ ಕುಮಾರ್ ಗೌಡ ಅವರ 50ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮತ್ತು ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಕಾವಲುಪಡೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ಗಳನ್ನು ನೀಡಲಾಯಿತು.
ಕರ್ನಾಟಕ ಕಾವಲುಪಡೆ ಜಿಲ್ಲಾ ಅಧ್ಯಕ್ಷರಾದ ಎಂ.ಕೃಷ್ಣ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ, ಶಾಲಾ ಮುಖ್ಯ ಶಿಕ್ಷಕಿ ಭಾಗ್ಯ, ಎಸ್ ಡಿ ಎಂ ಸಿ ಅಧ್ಯಕ್ಷ ಹರೀಶ್, ಸದಸ್ಯರಾದ ಧರ್ಮರಾಜ್, ಮಮತ, ಭಾಗ್ಯಶ್ರೀ, ಸಹ ಶಿಕ್ಷಕರಾದ ಶಿವಲಿಂಗು, ರಾಗಿಣಿ ವಿಜಯ, ಮೇರಿ, ವಾಣಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!