ಕುಶಾಲನಗರ, ಅ 26: ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಕೂಡಿಗೆಯ ಶ್ರೀ ಶಕ್ತಿ ವೃಧ್ಧಾಶ್ರಮದಲ್ಲಿರುವ ಪುರುಷ ಮತ್ತು ಮಹಿಳಾ ವೃದ್ಧರಿಗೆ ಹೊಸ ಬಟ್ಟೆಗಳನ್ನು ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಕೆ. ಜೆ.ವಿಮಲ ವಿತರಿಸಿದರು.
ಕೇಂದ್ರದ 30 ಹೆಚ್ಚು ಮಂದಿಗೆ ವಿತರಣೆ ಮಾಡಲಾಯಿತು.
ದೀಪಾವಳಿ ಹಬ್ಬದ ದಿನದ ಮಹತ್ವದ ಬಗ್ಗೆ ಕೂಡಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ ಕೆ ನಾಗರಾಜಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ವೃದ್ದಾಶ್ರಮದ ವ್ಯವಸ್ಥಾಪಕ ಚಂದ್ರು, ಪತ್ರಕರ್ತ ಗಣೇಶ್ ಹಾಜರಿದ್ದರು
Back to top button
error: Content is protected !!