ಕುಶಾಲನಗರ, ಅ 26: ಅರಣ್ಯದಿಂದ ರಸ್ತೆಗೆ ಬಂದ ಜಿಂಕೆಗೆ ಬೈಕ್ ಡಿಕ್ಕಿಯಾಗಿದ್ದು ಗಾಯಗೊಂಡಿದ್ದ ಜಿಂಕೆ ಮೃತಪಟ್ಟಿದೆ.
ಬಾಳುಗೋಡು-ರಸೂಲ್ ಪುರ ವ್ಯಾಪ್ತಿಯಲ್ಲಿ ಅರಣ್ಯದ ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳುತ್ತಿದ್ದ ಜಿಂಕೆಗೆ ಮಧ್ಯದಲ್ಲಿ ಹಾದು ಹೋಗಿದ್ದ ರಸ್ತೆಯಲ್ಲಿ ಬಂದ ಬೈಕ್ ಡಿಕ್ಕಿಯಾಗಿದೆ. ಬೈಕ್ ಡಿಕ್ಕಿಯಾದರೂ ಸಾವರಿಸಿಕೊಂಡ ಜಿಂಕೆ ಎದ್ದು ಕುಂಟು ತೆರಳಿದ್ದು ಸಮೀಪದ ಆವನಿ ಹೋಂ ಸ್ಟೇ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿದ್ದು.
ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿ ದುಬಾರೆಯತ್ತ ತೆರಳುತ್ತಿದ್ದ ಇಬ್ಬರು ಟಿಬೇಟ್ ಮಹಿಳೆಯರಿಗೆ ಕೂಡ ಗಂಭೀರ ಪೆಟ್ಟಾಗಿದೆ.
ಸೋಮವಾರ ಸಂಜೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಗಂಡು ಜಿಂಕೆ ಅನತಿ ದೂರದಲ್ಲಿ ಹೋಗಿ ಪ್ರಾಣ ಬಿಟ್ಟಿದೆ. ಮುಖ, ತೊಡೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಕಂಡುಬಂದಿದೆ.
Back to top button
error: Content is protected !!