ಕುಶಾಲನಗರ: ಸೇವೆಯಿಂದ ನಿವೃತ್ತರಾದರೂ ಸಂಘಟನೆಯಿಂದ ಸಹಕಾರದ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ನಿವೃತ್ತ ನೌಕರರು ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಸಿ.ಡಿ.ಪಿ.ಓ ಅಣ್ಣಯ್ಯ ಹೇಳಿದರು.
ನಿವೃತ್ತ ನೌಕರರ ಕೂಟದ ವತಿಯಿಂದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿನಾಯಕ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕುಳಿತುಕೊಳ್ಳಲು ಕುರ್ಚಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿವೃತ್ತ ನೌಕರರು ತಮ್ಮ ವೃತ್ತಿಯಿಂದ ಬಿಡುಗಡೆ ಹೊಂದಿದ ತಕ್ಷಣ ಇನ್ನೇನು ನಮ್ಮ ಬದುಕೇ ಮುಗಿಯಿತು ಎಂದುಕೊಳ್ಳುತ್ತಾರೆ ನಿವೃತ್ತರು, ಏಕಾಂಗಿತನದಿಂದ ನಿಮ್ಮಲ್ಲಿ ನಾನಾ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ, ಇದಕ್ಕೆ ನೀವು ಅವಕಾಶ ಮಾಡಿಕೊಡಬಾರದು ಎಂದರು.
ನಂತರ ನಿವೃತ್ತ ನೌಕರರ ಕೂಟದ ಪ್ರಮುಖರಾದ ಕೆಂಚಪ್ಪ ಮಾತನಾಡಿ, ನಮ್ಮ ಕೂಟದ ನಿವೃತ್ತ ನೌಕರರಿಗೆ ಸಮಸ್ಯೆಗಳು ಉಂಟಾದಾಗ ಕೂಟವು ಅವರ ಪರವಾಗಿ ನಿಂತಿದೆ. ಪ್ರತಿ ತಿಂಗಳು ಸಭೆ ಸೇರಿ ಅಗತ್ಯ ಚರ್ಚೆ ಮಾಡಲಾಗುತ್ತದೆ. ಹಾಗೆಯೇ ಕೂಟದ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯ ಮಾಡಲಾಗಿದೆ. ಅಂತೆಯೇ ಇಂದು ಅಂಗನವಾಡಿ ಕೇಂದ್ರದ ಮಕ್ಕಳಿಗೆ 20 ಕುರ್ಚಿಗಳನ್ನು ನೀಡಲಾಗಿದೆ ಎಂದರು.
ಈ ಸಂದರ್ಭ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಕೆ. ಚೆಲುವರಾಜು, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಆಸಿಫ್, ಮಣಿ, ಗಣೇಶ್, ನಿವೃತ್ತ ನೌಕರರ ಕೂಟದ ಅಧ್ಯಕ್ಷ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ನಾಗರಾಜು, ಪ್ರಮುಖರಾದ ರಾಜಶೇಖರ್, ಪೊನ್ನಪ್ಪ, ರಮೇಶ್, ಬಸಪ್ಪ, ಪದ್ಮನಾಭ, ಅಯ್ತಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಪುಟ್ಟಮ್ಮ, ನೀಲಮ್ಮ, ಸುಚಿತ್ರ, ಕಮಲಾಕ್ಷಿ, ಮತ್ತಿತರರು ಹಾಜರಿದ್ದರು.
Back to top button
error: Content is protected !!