ಕುಶಾಲನಗರ ಆ. 15: ಕೂಡಿಗೆಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯೊತ್ಸವ ಆಚರಿಸಲಾಯಿತು.
ಸಹಕಾರ ಸಂಘದ ಉಪಾಧ್ಯಕ್ಷ ಕೆ.ಬಿ. ಬಸಪ್ಪ ಧ್ವಜಾರೋಹಣ ನೆರವೇರಿದರು.
ದಿನದ ಮಹತ್ವದ ಬಗ್ಗೆ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಮಾತನಾಡಿದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಕೆ.ಜಿ. ಕುಮಾರ್, ಕೆ.ಪಿ. ರಾಜು, ಎಸ್. ಆರ್. ಅರುಣ್ ರಾವ್, ಕೆ.ಬಿ. ರಾಮಚಂದ್ರ, ರಮೇಶ್, ನಾಗರಾಜ್, ಎಸ್. ಎಸ್ ಕೃಷ್ಣ, ಸಂಘದ ಕಾರ್ಯನಿರ್ವಾಣಾಧಿಕಾರಿ ಎಂ.ಪಿ.ಮೀನಾ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಈ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ಹಾಲು, ಸಿಹಿ ವಿತರಣೆ ಮಾಡಲಾಯಿತು.
Back to top button
error: Content is protected !!