ಕುಶಾಲನಗರ, ಜೂ.29. ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ಸಮೀಪದಲ್ಲಿರುವ ಮಾವಿನಹಳ್ಳಿದಿಂದ ಬ್ಯಾಡಗೊಟ್ಟ ಗ್ರಾಮದವರೆಗಿನ ಗ್ರಾಮಗಳಿಗೆ ತೆರಳುವ ಹಾರಂಗಿ ಮುಖ್ಯ ನಾಲೆಯ ಗ್ರಾಮಸ್ಥರು ತಿರುಗಡುವ ರಸ್ತೆಯು ತೀರಾ ಕೆಸರುಮಯವಾಗಿದ್ದು ,ವಾಹನಗಳ ಚಾಲನೆ ಮತ್ತು ಸಾರ್ವಜನಿಕ ತಿರುಗಾಟಕ್ಕೆ ಬಾರಿ ತೊಂದರೆಗಳು ಅಗುತ್ತಿರುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯಿಂದ ಸರಿಪಡಿಸಲು ಈ ವ್ಯಾಪ್ತಿಯ 5 ಉಪ ಗ್ರಾಮಗಳ ಗ್ರಾಮಸ್ಥರು ಅಗ್ರಹಿಸಿದ್ದಾರೆ.
ಹಾರಂಗಿ ನಾಲೆ ಮೇಲಿನ ರಸ್ತೆಯು ಸರ್ವೀಸ್ ರಸ್ತೆಯಾಗಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ಉಪ ಗ್ರಾಮಗಳಲ್ಲಿ ಇರುವುದರಿಂದ ಈ ನಾಲೆ ಮೇಲಿನ ರಸ್ತೆಯೇ ಮುಖ್ಯವಾಗಿದ್ದು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
Back to top button
error: Content is protected !!