ಕುಶಾಲನಗರ, ಏ 24 : ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಉಗ್ರರ ಕೃತ್ಯವನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಮೇಣದ ಭತ್ತಿ ಹಿಡಿದು ಪ್ರತಿಭಟನೆ ನಡೆಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರಧ್ವಜ ಹಾಗೂ ಮೇಣದ ಭತ್ತಿ ಭಯೋತ್ಪಾದಕರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೆಲಕಾಲ ಮಾನವ ಸರಪಳಿ ನಿರ್ಮಿಸಿದ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.ಈ ಸಂದರ್ಭ ಮತಾಂಧತೆ ತೊಲಗಲಿ, ಮಾನವೀಯತೆ ಉಳಿಯಲಿ,ಮಾನವೀಯ ಐಕ್ಯತೆಗೆ ಜಿಂದಾಬಾದ್,ತೇರ ಭಾರತ್ ಮಹಾನ್ ಹೇ ಸರ್ವ ಧರ್ಮ್ ಸಮಾನ್ ಹೇ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಶಶಿಧರ್ ಮಾತನಾಡಿ, ಅಮಾಯಕ ಪ್ರವಾಸಿಗರನ್ನು ಅವರ ಮಕ್ಕಳು ,ಪತ್ನಿಯ ಸಮ್ಮುಖದಲ್ಲಿ ನಡೆದ ಈ ಕೃತ್ಯ ದೊಡ್ಡ ಕ್ರೌರ್ಯವಾಗಿದೆ.ಈ ಘಟನೆಯನ್ನು ಇಡೀ ಭಾರತವೇ ಖಂಡಿಸುತ್ತದೆ ಎಂದರು. ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಬೇಕಾಗಿತ್ತು. ಪ್ರವಾಸಿಗರ ಸುರಕ್ಷತೆಗಾಗಿ
ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು. ಈ ಘಟನೆಗೆ
ಜಾತಿ,ಭಾಷೆ,ಧರ್ಮದ ಲೇಪ ಬೇಡ ಎಲ್ಲರೂ ತೀವ್ರವಾಗಿ ಖಂಡಿಸುಬೇಕಾಗಿದೆ ಎಂದರು.
ಈ ಸಂದರ್ಭ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ , ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಪುರಸಭೆ ಸದಸ್ಯ ಖಾಲಿ ಮುಲ್ಲಾ, ವಿ.ಎಸ್.ಆನಂದ್ ಕುಮಾರ್, ನವೀನ್ ಕುಮಾರ್ ಮುಖಂಡರಾದ ಕೆ.ಎನ್.ಅಶೋಕ್, ಟಿ.ಬಿ.ಜಗದೀಶ್, ಕೆ.ಎಸ್.ಕೃಷ್ಣೇಗೌಡ,ಎಚ್.ಡಿ.ಚಂದ್ರು, ಸುಂಟಿಕೊಪ್ಪ ರಫೀಕ್, ಅಬ್ದುಲ್ ರಜಾಕ್, ರುಕ್ಮಿಣಿ, ಶಶಿಭೀಮಯ್ಯ, ಮಲ್ಲಿಕಾರ್ಜುನ ಪಾಲ್ಗೊಂಡಿದ್ದರು. ಇದೇ ಸಂದರ್ಭ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು
Back to top button
error: Content is protected !!