ಸೋಮವಾರಪೇಟೆ, ಫೆ 23: ಇಲ್ಲಿನ ಇಂದಿರಾ ಗಾಂಧಿ ಅಭಿಮಾನಿ ಸಂಘದ ವತಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಇಂದಿರಾ ಗಾಂಧಿ ಅಭಿಮಾನಿ ಸಂಘದ ಅಧ್ಯಕ್ಷ ಎಚ್.ಈ.ನಾಗರಾಜು ನೇತೃತ್ವದಲ್ಲಿ ಇಂದು ಪಟ್ಟಣದ ಆಂಜನೇಯ ದೇವಾಲಯದಲ್ಲಿ ದೇಶದಲ್ಲಿ ಶಾಂತಿ,ಸುಭಿಕ್ಷೆ ನೆಲಸಿ ಜನತೆ ನೆಮ್ಮದಿಯಿಂದ ಬದುಕು ನಡೆಸುವಂತಾಗಲಿ ಎಂಬ ಸಂಕಲ್ಪದೊಂದಿಗೆ ಪೂಜೆ ಸಲ್ಲಿಸಿ 36ನೇವರ್ಷದ ಪಾದಯಾತ್ರೆ ಆರಂಭಿಸಿದರು.
ಸಂಘದ ಸದಸ್ಯರುಗಳಾದ ರವೀಂದ್ರ, ಮುರುಳಿ,ಫಾರೂಕ್,ಸತ್ಯನಾರಾಯಣ,ನರಸಿಂಹ,
ರಮೇಶ್ ಹಾಗೂ ಕ್ಯಾಂಟೀನ್ ದೀಪು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
Back to top button
error: Content is protected !!