ಕುಶಾಲನಗರ, ಫೆ 12: ಕುಶಾಲನಗರದ ಬೈಚನಳ್ಳಿಯ ಯೋಗಾನಂದ ಬಡಾವಣೆಯ ಕಾವೇರಿ ನದಿ ತಟದಲ್ಲಿ ನೆಲೆನಿಂತಿರುವ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಫೆಬ್ರವರಿ 15 ನೇ ಶನಿವಾರ ಮತ್ತು 16 ನೇ ಭಾನುವಾರ ಅದ್ದೂರಿಯಾಗಿ ಶ್ರೀ ಮುತ್ತಪ್ಪ ತೆರೆ ಮಹೋತ್ಸವ ನಡೆಯಲಿದೆ ಎಂದು ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವರದ ತಿಳಿಸಿದ್ದಾರೆ.
15 ರಂದು ಶನಿವಾರ ಬೆಳಿಗ್ಗೆ 5.30 ಕ್ಕೆ ಗಣಪತಿ ಹೋಮ, 10.30 ಕ್ಕೆ ಧ್ವಜಾರೋಹಣ ,ಮಧ್ಯಾಹ್ನ 2 ಗಂಟೆಗೆ ಮುತ್ತಪ್ಪನ ಮಲೈ ಇರಕ್ಕಲ್ ,ಸಂಜೆ 4 ಗಂಟೆಗೆ ಕೇರಳದ ಪ್ರಖ್ಯಾತ ಚಂಡೆವಾದಕರ ವಾದ್ಯ ಘೋಷದೊಂದಿಗೆ ನೂರಾರು ಮಹಿಳೆಯರು ಜ್ಯೋತಿ ಬೆಳಗಿಸಿಕೊಂಡು ಅಯ್ಯಪ್ಪ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ತಾಲಪೋಲಿ ಮೆರವಣಿಗೆ ನಡೆಯಲಿದೆ.ಭಾನುವಾರ ರಾತ್ರಿ 7.30 ಅನ್ನದಾನ ,8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ,ರಾತ್ರಿ 11 ಗಂಟೆಗೆ ಕಳಿಗ ಪಾಟು ,12 ಗಂಟೆಗೆ ಕಳಸ ಆಗಮನ ,ಬೆಳಿಗ್ಗೆ 5 ಗಂಟೆಗೆ ತಿರುವಪ್ಪನ ವೆಳ್ಳಾಟಂ,ಮಧ್ಯಾಹ್ನ 12.30 ಅನ್ನದಾನ ನಡೆಯಲ್ಲಿದ್ದು ಸರ್ವ ಭಕ್ತಾಧಿಗಳು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿ ಎಂದು ಅವರು ಕೋರಿದ್ದಾರೆ.
Back to top button
error: Content is protected !!