ಕಾರ್ಯಕ್ರಮ

ಶ್ರೀ ಕಾವೇರಿ ಶಾಮಿಯಾನ, ಸೌಂಡ್ಸ್ ಮತ್ತು ಡೆಕೊರೇಷನ್ ಮಾಲೀಕರ ಸಂಘದ ನೂತನ ಕಛೇರಿ ಉದ್ಘಾಟನೆ

ಕುಶಾಲನಗರ, ಡಿ 03: ಕುಶಾಲನಗರ ತಾಲೂಕಿನ ಶ್ರೀ ಕಾವೇರಿ ಶಾಮಿಯಾನ, ಸೌಂಡ್ಸ್- ಮತ್ತು ಡೆಕೊರೇಷನ್ ಮಾಲೀಕರ ಸಂಘದ ನೂತನ ಕಛೇರಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಕೋಣಮಾರಿಯಮ್ಮ ದೇವಾಲಯ ಬಳಿ ನೂತನ ಕಛೇರಿಯನ್ನು ಸಂಘದ ಗೌರವಾಧ್ಯಕ್ಷ ಬಿ.ಜೆ.ಕೃಷ್ಣಣ್ಣ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡೈಮಂಡ್ ಮಣಿ, ಹೋಬಳಿ ಮಟ್ಟದಲ್ಲಿ ರಚನೆಯಾಗಿದ್ದ ಸಂಘ ಇದೀಗ ತಾಲೂಕು ಮಟ್ಟದ ಸಂಘವಾಗಿ ರೂಪುಗೊಂಡಿದ್ದು 45 ಸದಸ್ಯರನ್ನು ಒಳಗೊಂಡಿದೆ. ಎಲ್ಲಾ ರೀತಿಯ ಶುಭ ಸಮಾರಂಭಗಳು, ಕಾರ್ಯಕ್ರಮಗಳಿಗೆ ಅಗತ್ಯವಾಗಿ ಬೇಕಿರುವ ಸೌಂಡ್ಸ್, ಶಾಮಿಯಾನ ಒದಗಿಸುವ ಮಾಲೀಕರ ಸಂಘಟನೆಗೆ ಈ ಸಂಘ ಸೂಕ್ತ ವೇದಿಕೆಯಾಗಿದೆ. ಜನವರಿ ತಿಂಗಳಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಣಿ ತಿಳಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಕೆ.ಎಸ್.ರವಿ, ಕುಮರೇಶ್, ಪ್ರಧಾನ ಕಾರ್ಯದರ್ಶಿಗಳಾದ ಸಹಿಷ್ ಅಹಮದ್, ನವೀನ್, ವಿಶ್ವ, ಸಂಘಟನಾ ಕಾರ್ಯದರ್ಶಿ ಚನ್ನರಾಜ, ಖಜಾಂಚಿ ಸಂತೋಷ್, ಕ್ರೀಡಾ ಕಾರ್ಯದರ್ಶಿ ರಫೀಕ್, ಸಾಂಸ್ಕೃತಿಕ ಸಮಿತಿಯ ಪ್ರಶಾಂತ್, ನಿರ್ದೇಶಕರಾದ ಕೆ.ಪಿ.ನಾಗೇಂದ್ರ, ನಾಗರಾಜು, ಕೃಷ್ಣ, ಹರ್ಷ, ಮಸೂದ್, ರವಿ, ಮನು, ಜಯಂತ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!