ಕಾರ್ಯಕ್ರಮ

ಕುಶಾಲನಗರದಲ್ಲಿ‌ ನಡೆದ ಡಾ.ಬಾಬು ಜಗಜೀವನರಾಂ ಅವರ 37ನೇ ಪರಿನಿರ್ವಾಣ ಕಾರ್ಯಕ್ರಮ

ಕುಶಾಲನಗರ, ಜು 06: ಕುಶಾಲನಗರ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕುಶಾಲನಗರ ತಾಲೂಕು ತಹಸೀಲ್ದಾರ್ ಕಛೇರಿಯಲ್ಲಿ ಹಸಿರು ಕಾಂತ್ರಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 37ನೇ ಪುಣ್ಯಸ್ಮರಣೆ ಕಾರ್ಯಕ್ರಮ‌ ನಡೆಯಿತು.
ಜಗಜೀವನರಾಂ ಅವರ ಭಾವಚಿತ್ರಕ್ಕೆ‌
ಜ್ಯೋತಿ ಬೆಳಗಿ ಪುಷ್ಪಾರ್ಚನೆ ಮಾಡುವ ಮೂಲಕ ತಾಲ್ಲೂಕು ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಅವರು‌ ಕಾರ್ಯಕ್ರಮ ಉದ್ಘಾಟಿಸಿ ಜಗಜೀವನರಾಂ‌ ಅವರ ಕುರಿತು ಸಂದೇಶ ಸಾರಿದರು.
ಈ ಸಂದರ್ಭ ನೆರೆದಿದ್ದವರು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ‌ ಸಲ್ಲಿಸಿದರು.
ಈ ಸಂದರ್ಭ ಶಿರಸ್ತೇದಾರ್ ಅನಿತಾ, ವಾಲ್ಮೀಕಿ ಸಂಘದ‌ ಕೆ.ಎನ್.ಅಶೋಕ್, ಸಮಾಜ‌ ಕಲ್ಯಾಣ ಇಲಾಖೆಯ ಮಧು, ಮಂಜು ಸೇರಿದಂತೆ ತಾಲೂಕು ಕಛೇರಿಯ ಚೇತನ್, ಉಷಾ, ಲೋಕೇಶ್ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us