ಕ್ರೈಂ
ಕುಕ್ಕೆ ಸುಬ್ರಹ್ಮಣ್ಯ ಸಮೀಪ ಪತ್ತೆಯಾದ ಶಂಕಿತ ನಕ್ಸಲರು

ಕುಶಾಲನಗರ, ಮಾ 24:ಕುಕ್ಕೆ ಸುಬ್ರಹ್ಮಣ್ಯ ಸಮೀಪ ಪತ್ತೆಯಾದ ಶಂಕಿತ ನಕ್ಸಲರು..!
ನಿನ್ನೆ ರಾತ್ರಿ ಸುರಿದ ಮಳೆಗೆ ವಿಧಿಯಿಲ್ಲದೇ ಕಾಡಿನಿಂದ ಮನೆಗೆ ನುಗ್ಗಿದರೇ ನಕ್ಸಲರು..!
ಸುಬ್ರಹ್ಮಣ್ಯದ ಐನೆಕಿದು ಗ್ರಾಮದ ಕೋಟೆ ತೋಟದ ಮಜಲು ಎಂಬಲ್ಲಿಗೆ ಭೇಟಿ..
ಮಾ.23 ರ ಸಂಜೆ ಬಂದ ಮೂರು ಮಂದಿ ಅಪರಿಚಿತರು
ನಕ್ಸಲರಿರಬಹುದು ಎಂಬ ಗುಮಾನಿ..!
ಗ್ರಾಮದ ಅಶೋಕ್ ಎಂಬವರ ಮನೆಗೆ ಬಂದಿರುವುದಾಗಿ ಮಾಹಿತಿ.
ಮೊಬೈಲ್ ಚಾರ್ಚ್ ಮಾಡಿಸಿ ತೆರಳಿದ್ಧಾರೆ ಎನ್ನಲಾಗಿದೆ.
ಮನೆಯವರ ಜತೆ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮಾತುಕತೆ ನಡೆಸಿದ ತಂಡ
ನಕ್ಸಲ್ ನಿಗ್ರಹ ದಳದವರು ಇದೆ ಪ್ರದೇಶದಲ್ಲಿ ಕೂಂಬಿಂಗ್ ನಡೆಸುತ್ತಿದ್ದಾರೆ.
ಅಧಿಕಾರಿಗಳ ಸೂಕ್ತ ಮಾಹಿತಿಯ ಬಳಿಕ ವಾಸ್ತವಾಂಶ ತಿಳಿದು ಬರಲಿದೆ.



