ಧಾರ್ಮಿಕ

ವಾಸವಿ ಮಾತೆಗೆ ಪುಷ್ಪಾರ್ಚನೆ

ಕುಶಾಲನಗರ ಏ 27: ಆರ್ಯವೈಶ್ಯ ಕುಲದೇವತೆ ಶ್ರೀಮದ್ ವಾಸವಿ ಕನ್ನಿಕಾಪರಮೇಶ್ವರಿ ದೇವಿಯ ಜಯಂತಿಯ ಅಂಗವಾಗಿ ವಾಸವಿ ಮಾತೆಗೆ 13 ದಂಪತಿಗಳು ಪುಷ್ಪಾರ್ಚನೆ ನೆರವೇರಿಸಿದರು. ಇತ್ತೀಚೆಗೆ ಕುಶಾಲನಗರದ ರಥಬೀದಿಯಲ್ಲಿ ಇರುವ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ಯಕ್ರಮ ವಾಸವಿ ದೀಕ್ಷಾ ಸಮಿತಿ ನೇತೃತ್ವದಲ್ಲಿ ಜರುಗಿತು.

ಇದೇ ವೇಳೆ ದೀಕ್ಷಾ ಸಮಿತಿ ಅಧ್ಯಕ್ಷ ಕೆ.ಜೆ.ಚಿನ್ನಸ್ವಾಮಿ ಮಾತನಾಡಿ, ಪ್ರತಿ ವರ್ಷವೂ ಕುಶಾಲನಗರದ ಎಲ್ಲ ಆರ್ಯವೈಶ್ಯ ಕುಲಭಾಂದವರು ತಮ್ಮ ವ್ಯಾಪಾರ ವಹಿವಾಟು ಬಂದ್ ಮಾಡಿ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡುತ್ತೇವೆ. 7 ದಿನಗಳು ದೇವಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಅದೇ ರೀತಿ ನಮ್ಮ ಸಮಿತಿಯಿಂದ ದೇವಿಗೆ ದಂಪತಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇದಕ್ಕೆ ಆರ್ಯವೈಶ್ಯ ಮಂಡಳಿ ಮತ್ತು ಇತರೇ ಸಂಘಗಳ ಪದಾಧಿಕಾರಿಗಳು ಸಹಕಾರ ನೀಡಿದ್ದಾರೆ.
ವಾಸವಿ ದೀಕ್ಷಾ ಸಮಿತಿಯ ಕಾರ್ಯದರ್ಶಿ ಬಿ.ಎಲ್.ಸತೀಶ್, ಖಾಜಾಂಚಿ ವಾಣಿಶ್ರೀ, ನಿರ್ದೇಶಕರಾದ ಡಿ.ಎಸ್.ರಮೇಶ್, ವಿ.ಆರ್. ಮಂಜುನಾಥ್, ಎಸ್.ಎಂ.ಸತೀಶ್, ಬಿ.ಪಿ.ಕೃಷ್ಣಮೂರ್ತಿ, ಕೆ.ಎಸ್.ನಾಗೇಶ್, ನಾಗಮಣಿ ಮತ್ತು ಕುಲಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!