ಕುಶಾಲನಗರ, ಸೆ 19:ಕುಶಾಲನಗರ ಪುರಸಭಾ ವ್ಯಾಪ್ತಿಯ ಅರಣ್ಯ ಹಕ್ಕು ಸಮಿತಿ ಸಭೆ ಸಮಿತಿಅಧ್ಯಕ್ಷ ಗೋವಿಂದಪ್ಪ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಈಗಾಗಲೆ ಇಲಾಖೆ ನಿರ್ದೇಶನದಂತೆ ಹಕ್ಕುಪತ್ರ ಪಡೆದುಕೊಳ್ಳಲು ವಿಧಿಸಿರುವ ನಿಬಂಧನೆಗಳಂತೆ ಅಗತ್ಯ ದಾಖಲಾತಿಗಳ ಒಳಗೊಂಡ 144 ಅರ್ಜಿಗಳು ಸಲ್ಲಿಕೆ ಮಾಡಲಾಗಿದೆ, ಈ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ಚರ್ಚಿಸಲಾಯಿತು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ತಾಲೂಕು
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ,
ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್, ಸಮಿತಿ
ಸದಸ್ಯರಾದ ಎಂ.ಎಂ.ಪ್ರಕಾಶ್, ಮೀನಾ,ಕಾಂಚನ,ನಾಗರಾಜು,ದಿವಾಕರ, ಸ್ವಾಮಿ ನಾಯಕ,ಚೆಲುವಮ್ಮ,ಈಶ್ವರಿ,ಜಯಶಂಕರ್,ರತ್ನ ಹಾಗೂ ಉಪ ವಲಯ ಅರಣ್ಯಾಧಿಕಾರಿ ಎಚ್.ಬಿ.ಉಮೇಶ್ ಇದ್ದರು.
Back to top button
error: Content is protected !!