ಕಾರ್ಯಕ್ರಮ

ಚಿತ್ರಕಲೆ ಹಾಗೂ ಕೈಬರಹ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಕುಶಾಲನಗರ ಸೆ 13 : ಕುಶಾಲನಗರದ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡಮಿ” ವತಿಯಿಂದ ಫಾತಿಮಾ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಚಿತ್ರಕಲೆ ಹಾಗೂ ಕೈಬರಹ ಸ್ಪರ್ಧೆಯ ವಿಜೇತರಿಗೆ ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಬಹುಮಾನ ವಿತರಿಸಿದರು.
ಚಿತ್ರಕಲೆಯಲ್ಲಿ ಸಬ್ ಜೂನಿಯರ್ ವಿಭಾಗದ ಯುಕ್ತಿ.ಕೆ.ಎಂ ಪ್ರಥಮ, ಬಾನುತೇಜ್ ದ್ವೀತೀಯ, ಕರುಣ್ ತೃತೀಯ, ಜೂನಿಯರ್ ವಿಭಾಗದಲ್ಲಿ ಸೋನು.ಎಚ್.ಎ ಪ್ರಥಮ, ಸೃಜನ್ ದ್ವಿತೀಯ, ಟೆರೆನ್ಸ್ ಡಿಸೋಜ ತೃತೀಯ, ಸೀನಿಯರ್ ವಿಭಾಗದಲ್ಲಿ ಕನಿಷ್ಕ.ಎ.ಸಿ ಪ್ರಥಮ, ಸುಹಾಸ್.ಕೆ.ಎಸ್ ಸ್ವಿತೀಯ, ಅಕ್ಷತ ಹಾಗೂ ಪ್ರಿಯ.ಪಿ.ವಿ ತೃತೀಯ ಸ್ಥಾನವನ್ನು ಪಡೆದುಕೊಂಡರು. ಕೈ ಬರಹ ಸ್ಪರ್ಧೆಯಲ್ಲಿ ಶ್ವೇತ.ಕೆ.ಎನ್ ಪ್ರಥಮ, ಹಾರುನ್.ಎಸ್ ದ್ವಿತೀಯ, ಲಾವಣ್ಯ.ಡಿ.ಸಿ ತೃತೀಯ, ಜೂನಿಯರ್ ವಿಭಾಗದಲ್ಲಿ ಉಜ್ವಲ.ವಿ ಪ್ರಥಮ, ಸಿಯೋನ ಎಂಜಲ್ ದ್ವಿತೀಯ, ಜೀವನ್.ಕೆ.ಎಲ್ ತೃತೀಯ, ಸೀನಿಯರ್ ವಿಭಾಗದಲ್ಲಿ ರಂಜಿನಿ.ಎಂ.ಆರ್ ಪ್ರಥಮ, ಕನಿಷ್ಕ.ಎ.ಸಿ ದ್ವಿತೀಯ, ಪ್ರಿಯ.ವೈ.ಪಿ ಹಾಗೂ ಸುಮತಿ ತೃತೀಯ ಸ್ಥಾನ ಪಡೆದುಕೊಂಡರು. ವಿಜೇತ ಸ್ಪರ್ಧಾಳುಗಳಿಗೆ ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಸೋಲು ಗೆಲುವಿಗಿಂತ, ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ. ಎಲ್ಲರೂ ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ಈ ಸಂದರ್ಭ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡಮಿ”ಯ ನೃತ್ಯ ಸಂಯೋಜಕ ಅಕ್ತರ್ ಹಾಗೂ ಪೋಷಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!