ಸಭೆ

ಕುಶಾಲನಗರ: ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮಹಾಸಭೆ

ಕುಶಾಲನಗರ, ಆ -29: ಕುಶಾಲನಗರದ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ 72 ನೇ ಮಹಾಸಭೆ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎನ್.ಕುಮಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದಲ್ಲಿ 1870 ಸದಸ್ಯರಿದ್ದಾರೆ.
ಸಂಘದ ಅಧೀನದಲ್ಲಿ ಇರುವ ವ್ಯಾಪಾರ ಮಳಿಗೆಗಳು, ಗೋದಾಮುಗಳಿಂದ ವಾರ್ಷಿಕ 14.03 ಲಕ್ಷ ಆದಾಯ ಬರುತ್ತಿದೆ.
ಸಂಘದ ಆವರಣದಲ್ಲಿ ಅಳವಡಿಸಿರುವ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕದಿಂದ ಈವರೆಗೆ 13.97 ಲಕ್ಷ ಆದಾಯ ಬಂದಿದೆ.
ಸಂಘದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 86.71 ಕೋಟಿ ವಹಿವಾಟು ನಡೆಸಲಾಗಿದ್ದು, 9.44 ಕೋಟಿ ರೂಗಳ ವ್ಯಾಪಾರ ವಹಿವಾಟು ನಡೆಸಲಾಗಿದೆ.
76.26 ಲಕ್ಷ ರೂಗಳ ವ್ಯಾಪಾರ ಲಾಭ ಗಳಿಸಿದ್ದು 32.66 ಲಕ್ಷ ರೂಗಳ ನಿವ್ವಳ ಲಾಭ ಗಳಿಸಲಾಗಿದೆ.
ಸಂಘದಲ್ಲಿ 708.70 ಲಕ್ಷ ಒಟ್ಟು ಠೇವಣಿ ಇದ್ದು, 672.74 ಲಕ್ಷ ರೂಗಳ ಸಾಲ ಸೌಲಭ್ಯ ನೀಡಲಾಗಿದೆ.
294.58 ಲಕ್ಷ ಹೂಡಿಕೆ ಮಾಡಲಾಗಿದ್ದು, 595.66 ಲಕ್ಷ ರೂಗಳ ನಿಧಿಗಳಿರುವ ಬಗ್ಗೆ ಸಭಾಧ್ಯಕ್ಷ ಕುಮಾರಪ್ಪ ಮಾಹಿತಿ ನೀಡಿದರು.
ಸಂಘದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.20 ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭ ಗಾಯಕಿ ಪ್ರಗತಿ ಬಡಿಗೇರ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಹೆಚ್.ಜೆ.ದೊಡ್ಡಯ್ಯ, ನಿರ್ದೇಶಕರಾದ ಕೆ.ಎಂ.ಪ್ರಸನ್ನ, ಎ.ಪಿ.ನೀಲಮ್ಮ, ಅರ್.ಕೆ.ಚಂದ್ರು, ಕೆ.ಎಸ್.ರತೀಶ್, ಹೆಚ್.ಟಿ.ನಾಗೇಶ್, ಸಿ.ಜಿ.ಲತಾ, ಸಿ.ಎನ್.ಲೋಕೇಶ್, ಪಿ.ಪಿ.ತಿಲಕಕುಮಾರ್, ಮೊಹಮ್ಮದ್ ಸಾಲೇಹ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಜಗದೀಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!