ಕುಶಾಲನಗರ, ಆ 28: ಜವಳಿ ಸಚಿವಾಲಯ ಹಾಗೂ ಬೆಂಗಳೂರಿನ ನೇಕಾರರ ಸೇವಾ ಕೇಂದ್ರದ ಆಶ್ರಯದಲ್ಲಿ ಸಮರ್ಥ್ ಯೋಜನೆಯಡಿ ಹೆಬ್ಬಾಲೆಯಲ್ಲಿ ಕೈಮಗ್ಗ ನೇಕಾರರಿಗೆ ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು.
ಹೆಬ್ಬಾಲೆಯ ಕೈಮಗ್ಗ ನೇಕಾರರ ಮತ್ತು ಸಿದ್ದ ಉಡುಪು ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘದಲ್ಲಿ ನಡೆದ ಕಾರ್ಯಾಗಾರವನ್ನು
ಜವಳಿ ಮತ್ತು ಕೈಮಗ್ಗ ಇಲಾಖೆ ಕೊಡಗು ಜಿಲ್ಲಾ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ತರಬೇತಿ ನಿರತರು ಶ್ರದ್ಧೆಯಿಂದ ಉದ್ಯಮ ಕಲಿಯಲು ಪ್ರಯತ್ನಿಸಬೇಕಿದೆ. ನೇಕಾರಿಕೆಯಲ್ಲಿ ಪ್ರಶಸ್ತಿ ಪಡೆಯುವಂತಹ ನೈಪುಣ್ಯತೆ ಹೊಂದಬೇಕಿದೆ. ನೇಕಾರ ಉದ್ಯಮ ಕೈಗೊಳ್ಳಲು ಇಲಾಖೆಯಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ
ಹೆಬ್ಬಾಲೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಎಚ್.ಪಿ.ಅರುಣಕುಮಾರಿ ಮಾತನಾಡಿ, ನೇಕಾರರ ಸಂಘಕ್ಕೆ ನಿವೇಶನ ಒದಗಿಸಲು ಪಂಚಾಯತಿ ವತಿಯಿಂದ ಅಗತ್ಯ ಕ್ರಮವಹಿಸಲಾಗುವುದು. ನೇಕಾರ ತರಬೇತಿ ಪಡೆಯುವ ಮೂಲಕ ಇಲ್ಲಿಯೇ ಗಾರ್ಮೆಂಟ್ಸ್ ಆರಂಭವಾದಲ್ಲಿ ಹಲವರಿಗೆ ಸಹಕಾರಿಯಾಗಲಿದೆ ಎಂದರು.
ಸಂಘದ ನಿರ್ದೇಶಕ ವೆಂಕಟೇಶ್ ಹಾಗೂ ಕಾರ್ಯದರ್ಶಿ ಸವಿತಾ ಮಾತನಾಡಿ ಸಂಘದ ಬಗ್ಗೆ ಮಾಹಿತಿ ನೀಡಿದರು.
ಬೆಂಗಳೂರಿನ ನೇಕಾರರ ಸೇವಾ ಕೇಂದ್ರದ ಹಿರಿಯ ಅಧಿಕಾರಿ ಎಸ್. ಮಾರಿಮುತ್ತು ಮತ್ತು ತಾಂತ್ರಿಕ ಅಧಿಕಾರಿ ಎ ತುಳಸಿ ರಾಮನ್, ಕೇಂದ್ರ ಜವಳಿ ಯೋಜನೆ ಮತ್ತು ಉದ್ಯಮದ ಬಗ್ಗೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಮಾಹಿತಿಯನ್ನು ನೀಡಿದರು.
ಕಾರ್ಯಗಾರದಲ್ಲಿ ಜಿಲ್ಲಾ ನೇಕಾರ ಒಕ್ಕೂಟದ ನಿರ್ದೇಶಕ ಕೆ. ಕೆ. ನಾಗರಾಜಶೆಟ್ಟಿ, ತರಬೇತುದಾರ ರಾದ ನಾಗರಾಜ್, ಪಿ.ಬೊಮ್ಮಣ್ಣ, ಹಾಜರಿದ್ದರು.
Back to top button
error: Content is protected !!