ಕುಶಾಲನಗರ, ಏ 05; ಬೇಸಿಗೆ ಶಿಬಿರಗಳು ಮಕ್ಕಳ ದೈಹಿಕ ಚಟುವಟಿಕೆಗಳಿಗೆ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ. ಹೆಚ್ಚಿನ ಮಕ್ಕಳು ನಾನಾ ಕಾರಣಗಳಿಂದಾಗಿ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿರುತ್ತಾರೆ. ಇಂತಹ ಮಕ್ಕಳಿಗೆ ಬೇಸಿಗೆ ಶಿಬಿರಗಳು ಅನುಕೂಲ ಮಾಡಿಕೊಡುತ್ತವೆ. ಶಿಬಿರದಲ್ಲಿ ಸಿಗುವ ಮುಕ್ತ ವಾತಾವರಣ ಅವರಲ್ಲಿನ ಭಯ ಹೋಗಲಾಡಿಸುತ್ತದೆ ಹೊಸ ಉತ್ಸಾಹ, ಚೈತನ್ಯ ತುಂಬುತ್ತದೆ ಎಂದು ಟೌನ್ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿ ಗೀತಾ ಕಿವಿಮಾತು ಹೇಳಿದರು.
ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ ನ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗೂ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಮಕ್ಕಳು ದಿನದ ಬಹುತೇಕ ಅವಧಿಯನ್ನು ಟಿವಿ, ಕಂಪ್ಯೂಟರ್, ವಿಡಿಯೋ ಗೇಮ್ ಗಳ ಎದುರೇ ಕಳೆಯುತ್ತಾರೆ. ಇದರಿಂದ ಅವರು ಎಲ್ಲರ ಜತೆಗಿದ್ದರೂ ಏಕಾಂಗಿಯಾಗಿ ರುತ್ತಾರೆ. ಆದರೆ ಬೇಸಿಗೆ ಶಿಬಿರದಲ್ಲಿ ಮಕ್ಕಳಲ್ಲಿರುವ ಪ್ರತಿಭೆಗೆ ವೇದಿಕೆ ಸಿಗುತ್ತದೆ. ಕೆಲವು ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರಬಹುದು, ಶಾಲೆಯಲ್ಲಿ ಅದಕ್ಕೆ ಸೂಕ್ತ ವೇದಿಕೆ ಸಿಗದೇ ಹೋಗಿರಬಹುದು. ಅಥವಾ ಕೆಲ ಮಕ್ಕಳಿಗೆ ತಮ್ಮಲ್ಲಿ ಇಂಥದ್ದೊಂದು ವಿಶೇಷವಾದ ಪ್ರತಿಭೆ ಇದೆ ಎಂದು ತಿಳಿಯದೇ ಇರಬಹುದು. ಆದರೆ ಬೇಸಿಗೆ ಶಿಬಿರಗಳು ಮಕ್ಕಳಲ್ಲಿರುವ ಕಲೆ, ವಿಶೇಷ ಕೌಶಲ್ಯಗಳಿಗೆ ವೇದಿಕೆ ಕಲ್ಪಿಸಿಕೊಡುತ್ತವೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾತನಾಡಿ, ಮಕ್ಕಳು ಕಲಿಕೆ ಮತ್ತು ಶಾಲಾ ಪಠ್ಯಗಳನ್ನು ಓದುವುದರ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕು. ಇದರಿಂದ ಮನಸ್ಸಿಗೆ ಉಲ್ಲಾಸ ಹಾಗೂ ಪ್ರತಿಯೊಂದರಲ್ಲಿಯೂ ಕಲಿಕೆ ಬಗ್ಗೆ ಆಸಕ್ತಿ ಹಾಗೂ ಅಭಿರುಚಿ ಮೂಡಿ ಬರುತ್ತದೆ. ಮಕ್ಕಳ ಅಭಿರುಚಿಗಳಿಗೆ ಇಂತಹ ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ಪ್ರಭುದೇವ್ ಮಾತನಾಡಿ,
ಹಿಂದೆಲ್ಲ ಶಾಲಾ ಪರೀಕ್ಷೆಗಳು ಮುಗಿಯುತ್ತಿದ್ದಂತೆ ಮಕ್ಕಳು ಅಜ್ಜಿಮನೆಗೆ ದಾಂಗುಡಿ ಇಡುತ್ತಿದ್ದರು. ಬೇಸಿಗೆ ರಜೆಯ ಎರಡು ತಿಂಗಳುಗಳಲ್ಲಿ ಈಜು, ಆಟ, ತೋಟದಲ್ಲಿ ಸುತ್ತಾಟ ಎಂದು ಸಮಯ ಕಳೆದುಹೋದದ್ದೇ ತಿಳಿಯುತ್ತಿರಲಿಲ್ಲ. ಮಕ್ಕಳು ಕೇವಲ ಇಂಟರನೆಟ್, ಕಂಪ್ಯೂಟರ್, ಮೊಬೈಲ್ಗಳಲ್ಲಿ ವ್ಯರ್ಥ ಕಾಲ ಹರಣ ಮಾಡದೆ ಬೇಸಿಗೆ ಶಿಬಿರಗಳ ಪಯೋಜನ ಪಡೆದು ಜ್ಞಾನವಂತರಾಗಬೇಕೆಂದು ಕರೆ ನೀಡಿದರು.
ನಂತರ ಕುಶಾಲನಗರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರಮೋಹನ್, ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದಿನೇಶ್ ಶೆಟ್ಟಿ, ವಕೀಲರಾದ ಶರತ್, ಮಡಿಕೇರಿ ಜಿಲ್ಲಾಸ್ಪತ್ರೆಯ ನೇತ್ರಾಧಿಕಾರಿ ಚೇತನ್ ಕುಮಾರ್. ಎಸ್, ಮಾತನಾಡಿದರು.
ಈ ಸಂದರ್ಭ ಶಿವಧಾರೆ ನೃತ್ಯ ಸಂಸ್ಥೆಯ ನೃತ್ಯ ಸಂಯೋಜಕ ಚೇತನ್ ರವಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆದಂ. ಎಸ್, ರಾಯಲ್ ಬಿರಿಯಾನಿ ಸೆಂಟರ್ ನ ಮಾಲೀಕ ಬಾಷಾ, ಸೇರಿದಂತೆ ಪೋಷಕರು ಹಾಗೂ ಮಕ್ಕಳು ಹಾಜರಿದ್ದರು.
Back to top button
error: Content is protected !!