ಕುಶಾಲನಗರ, ನ 10: ಮೂರು ಕೋಟಿ ಅನುದಾನದಲ್ಲಿ ಪೊನ್ನಂಪೇಟೆ ತಾಲೂಕಿನ ರಸ್ತೆ ಅಭಿವೃದ್ದಿ ಡಾಂಬರೀಕರಣಕ್ಕೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.
ಬಿ.ಶೆಟ್ಟಿಗೇರಿ, ನಾಲ್ಕೇರಿ ಸಂಪರ್ಕ ರಸ್ತೆ, ನಲ್ಲೂರು, ಬೆಸಗೂರು, ಮಾಯಮುಡಿ, ಜೋಡುಬೀಟಿ, ಕುಂದಾ ಸಂಪರ್ಕ ರಸ್ತೆ ಡಾಂಬರೀಕರಣಕ್ಕೆ ಪೂಜೆ ನೆರವೇರಿಸಿ ಪ್ರಾರ್ಥಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಂಞಂಗಡ ಅರುಣ್ ಭೀಮಯ್ಯ, ತಾಲೂಕು ಕೃಷಿ ಮೋರ್ಚ ಅಧ್ಯಕ್ಷ ಕಟ್ಟೇರ ಈಶ್ವರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸರಿತಾ, ಉಪಾಧ್ಯಕ್ಷ ಹೆಚ್. ರಾಮು, ಸದಸ್ಯರುಗಳಾದ ಮಚ್ಚಮಾಡ ಸುಮನ್, ಮನ್ನೇರ ಅಜಿತ್, ಬಾಬು, ಕೃಷ್ಣ, ಕಟ್ಟೇರ ಗ್ರೇಸಿ, ಸಹಕಾರ ಸಂಘದ ಉಪಾಧ್ಯಕ್ಷರು ತಡಿಯಂಗಡ ಕರುಂಬಯ್ಯ, ಆರ್.ಎಂ.ಸಿ. ಮಾಜಿ ಉಪಾಧ್ಯಕ್ಷೆ ಬೊಳ್ಳಜೀರ ಸುಶೀಲಾ, ಶಕ್ತಿ ಕೇಂದ್ರ ಪ್ರಮುಖ್ ಮಾಣಿರ ಉಮೇಶ, ಉಪಪ್ರಮುಖ್ ಮಚ್ಚಮಾಡ ಶ್ಯಾಮ್, ನಾಲ್ಕೇರಿ ಉಪಾಧ್ಯಕ್ಷ ಚಿರಿಯಪಂಡ ಸಚಿನ್, ಇದ್ದರು.
Back to top button
error: Content is protected !!