ಕುಶಾಲನಗರ, ನ 09: 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮನವಿ ಮಾಡಿದರು.
ಬೆಂಗಳೂರಿನಿಂದ ಕುಶಾಲನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ತೆರಳುತ್ತಿದ್ದ ಅವರು ಬುಧವಾರ ಸಂಜೆ ಹುಣಸೂರು ಬೈಪಾಸ್ನ ಶಬ್ಬೀರ್ನಗರದ ಮಸೀದಿಯಲ ಪ್ರಾರ್ಥನೆ ಸಲ್ಲಿಸಿದ ನಂತರ ಸ್ಥಳೀಯ ಹೋಟೆಲ್ನಲ್ಲಿ ಮುಖಂಡರೊಂದಿಗೆ ಚಹ ಸೇವಿಸಿ ತಾಲೂಕಿನ ರಾಜಕೀಯ ವಿದ್ಯಾಮಾನಗಳ ಕುರಿತು ಕುಶಲೋಪಹರಿ ಚರ್ಚಿಸಿದರು. ತಾಲೂಕಿನ ಮುಖಂಡರು ನನ್ನ ಮೇಲಿಟ್ಟಿರುವ ಅಭಿಮಾನ ಹೀಗೆ ಇರಲಿ. ಮತ್ತೊಮ್ಮೆ ತಾಲೂಕಿನಲ್ಲಿ ತಾವು ಇತರೆ ಮುಖಂಡರೊಂದಿಗೆ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಹರೀಶ್ಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಮುಖಂಡರಾದ ಸರ್ದಾರ್, ಸೈಯದ್, ಸೋಮಣ್ಣ ಸೇರಿದಂತೆ ಅನೇಕರಿದ್ದರು.
Back to top button
error: Content is protected !!