ಸಭೆ

ಮದಲಾಪುರ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ

ಕುಶಾಲನಗರ, ಆ.26: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್. ಆರ್. ಸುನಿಲ್ ರಾವ್ ರವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಹಾಸನ ಹಾಲು
ಒಕ್ಕೂಟದ ವಿಸ್ತಾರಣಾಧಿಕಾರಿ ಬಿ.ವಿ. ವೀಣಾ ಮಹಾಸಭೆ ಉದ್ಘಾಟಿಸಿದರು.

ಸಭೆಯಲ್ಲಿ ಮೃತಪಟ್ಟ ಸದಸ್ಯರಿಗೆ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪತ್ನಿ ದಿವಂಗತ ಚೆನ್ನಮ್ಮ ಅವರಿಗೆ ಸಂತಾಪ ಸೂಚಿಸಲಾಯಿತು. ವಾರ್ಷಿಕ ಮಹಾಸಭೆ ಆಹ್ವಾನ ಪತ್ರಿಕೆ ಹಾಗೂ ಹಿಂದಿನ ಸಾಲಿನ‌ ವಾರ್ಷಿಕ‌ ಮಹಾಸಭೆ ವರದಿ‌ ಓದಿ‌ ಅಂಗೀಕರಿಸಲಾಯಿತು.

ವಿಸ್ತರಣಾಧಿಕಾರಿ ಬಿ.ವಿ.ವೀಣಾ ಅವರು ಸಂಘದ 2025-26ನೇ ಸಾಲಿನ
ಅಡಿಟ್ ವರದಿ ವಾಚಿಸಿದರು. ಸಂಘದಲ್ಲಿ ಹಾಲಿನ ಶೇಖರಣಾ ಪ್ರಮಾಣ ಕ್ಷೀಣಿಸುತ್ತಿದೆ. ಹಾಲಿನ ಗುಣಮಟ್ಟ ಕೂಡ‌ ಮತ್ತಷ್ಟು ವೃದ್ದಿಸಬೇಕಿದೆ. ಸಂಘದ ಅಭಿವೃದ್ದಿಗೆ ಸದಸ್ಯರು ಹೆಚ್ಚಿನ ಸಹಕಾರ‌ ಅಗತ್ಯವಿದೆ ಎಂದು ಹೈನುಗಾರರಿಗೆ ಸಲಹೆ ನೀಡಿದರು.
25-26ನೇ ಸಾಲಿಗೆ ಅಂದಾಜು ಬಜೆಟ್ ಮಂಜೂರು ಮಾಡಿ, 26-27ನೇ ಸಾಲಿಗೆ ಲೆಕ್ಕಪರಿಶೋಧಕರ ಆಯ್ಕೆ ಮಾಡಲಾಯಿತು.

ಸಂಘದ ಅಧ್ಯಕ್ಷ ಸುನಿಲ್ ರಾವ್ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ
ಸಂಘದ ಅಧ್ಯಕ್ಷ ಎಸ್.ಆರ್.ಸುನಿಲ್ ರಾವ್ ಮಾತನಾಡಿ, ಹಲವು ವರ್ಷಗಳಿಂದ ಸಂಘದಲ್ಲಿ ಇದ್ದ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ‌ ನಿವಾರಣೆಯಾಗುತ್ತಿರುವುದು ಆಶಾದಾಯಕ ಸಂಗತಿ. ಸಂಘದ ಅಳಿವು ಉಳಿವು ಹಾಲು ಹಾಕುವವರ ಕೈಯಲ್ಲಿದೆ. 25 ಲೀ ಇದ್ದ ಹಾಲಿನ ಸಂಗ್ರಹ 250 ಲೀಟರ್ ಗೆ ಹೆಚ್ಚಳಗೊಂಡಿದೆ. ನಮ್ಮ ಈ ಸಂಘದ ಕಾರಣದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಸಂಘಗಳು ಸ್ಥಾಪನೆಯಾಗಿವೆ. ಸಂಘದ ಕಾರ್ಯವ್ಯಾಪ್ತಿಗೆ ಬರುವ ಹಾಲು ಉತ್ಪಾದಕರು ಈ‌ ಸಂಘಕ್ಕೆ ಹೆಚ್ಚು ಹಾಲು ನೀಡುವ ಮೂಲಕ ಸಂಘದ ಏಳಿಗೆಗೆ ಸಹಕಾರ ನೀಡಬೇಕಿದೆ ಎಂದು ಕೋರಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಆರ್.ತಮ್ಮಯ್ಯ, ನಿರ್ದೇಶಕರರಾದ ವೆಂಕಟನಾಯಕ್, ಹೆಚ್.ಆರ್.ಕೃಷ್ಣ, ಸುರೇಶ್ ವಿ.ಸಿ, ವಸಂತ ಬಿ.ಎ, ಮಂಜುಳಾ, ಗಾಯತ್ರಿ ಕೆ.ಕೆ, ಚಂದ್ರಿಕಾ, ದೇವೀರಮ್ಮ, ಗಿರಿಜಾ ವೈ.ಆರ್, ಮುಖ್ಯ ಕಾರ್ಯದರ್ಶಿ ಎಂ.ಎನ್. ಯೋಗೇಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!