ಕುಶಾಲನಗರ, ಆ 22: ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಅಪರಿಚಿತ ಕಾರು ಡಿಕ್ಕಿಯಾಗಿ ಓರ್ವ ಮೃತಪಟ್ಟ ಘಟನೆ ಕೂಡಿಗೆ ಸೇತುವೆ ಮೇಲೆ ಶುಕ್ರವಾರ ರಾತ್ರಿ ನಡೆದಿದೆ.
ಕೂಡುಮಂಗಳೂರು ನಿವಾಸಿ
ರವಿ ಕೆ.ಪಿ ಮೃತಪಟ್ಟ ದುರ್ದೈವಿ. ಈತನ ಸಂಬಂಧಿ ರೂಪೇಶ್ ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.
ರಾತ್ರಿ 10 ಗಂಟೆಗೆ ಊಟವಾದ ಬಳಿಕ ಇಬ್ಬರೂ ಹೆದ್ದಾರಿ ಬದಿ ವಾಕಿಂಗ್ ಗೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭ ಅಪರಿಚಿತ ಕಾರೊಂದು ಇವರಿಬ್ಬರಿಗೆ ಡಿಕ್ಕಿಪಡಿಸಿ ಪರಾರಿಯಾಗಿದೆ. ಘಟನೆಯಲ್ಲಿ ರವಿ ಮೃತಪಟ್ಟಿದ್ದಾರೆ. ಅಪಘಾತಪಡಿಸಿರುವುದು ಸ್ವಿಫ್ಟ್ ಕಾರು ಎಂಬ ಗುಮಾನಿಯಿದ್ದು ಪತ್ತೆ ಕಾರ್ಯ ನಡೆಯುತ್ತಿದೆ.
Back to top button
error: Content is protected !!