ಕಾಮಗಾರಿ
ರೂ 35 ಲಕ್ಷ ವೆಚ್ಚದಲ್ಲಿ ಹೆಬ್ಬಾಲೆ ಪದವಿಪೂರ್ವ ಕಾಲೇಜು ಮೇಲ್ಚಾವಣಿ ದುರಸ್ತಿ ಕಾರ್ಯ


ಕೂಡಿಗೆ, ಜು. 16: ಹೆಬ್ಬಾಲೆಯಲ್ಲಿರುವ ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಕಾಲೇಜು ವಿಭಾಗ ಹಾಗೂ ಪ್ರೌಢಶಾಲಾ ವಿಭಾಗದ ಶಿಥಿಲಗೊಂಡಿರುವ ಮೇಲ್ಚಾವಣಿಯ ಸಂಪೂರ್ಣ ದುರಸ್ತಿಯ ಕಾಮಗಾರಿಯನ್ನು ಉದ್ಯಮಿಗಳು, ಕಾಂಗ್ರೆಸ್ ಮುಖಂಡ, ಕೊಡುಗೈ ದಾನಿಗಳಾದ ನಾಪಂಡ ಮುತ್ತಪ್ಪ, ಹಾಗೂ ನಾಪಂಡ ಮುದ್ದಪ್ಪ ರವರ ಸಹಕಾರದೊಂದಿಗೆ ರೂ. 35. ಲಕ್ಷ ವೆಚ್ಚದಲ್ಲಿ ಕಾಲೇಜಿನ ಕಾಮಗಾರಿಯು ಭರದಿಂದ ಸಾಗುತ್ತಿದೆ.