ಧಾರ್ಮಿಕ

ಕುಶಾಲನಗರದ ಡಾ.ಶಿವಕುಮಾರ ಸ್ವಾಮೀಜಿ ವೃತ್ತಕ್ಕೆ ಭೇಟಿ ನೀಡಿದ ಸಿದ್ದಲಿಂಗ ಶ್ರೀಗಳು

ಕುಶಾಲನಗರ, ಜು 16 : ನಾಡಿನಾದ್ಯಂತ ಗ್ರಾಮೀಣ ಪ್ರದೇಶಗಳ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ದೊರಕಬೇಕೆಂಬ ಕನಸು ನಡೆದಾಡಿದ ದೈವ ಸಿದ್ದಗಂಗಾ ಮಠದ ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಕನಸಾಗಿತ್ತು.

ಅಂತೆಯೇ ಶ್ರೀಗಳ ಅಪ್ರತಿಮ ಸೇವೆಯಿಂದಾಗಿ ಭಕ್ತರ ಪಾಲಿನ ವಿಶ್ವ ಕಂಡ ಶ್ರೇಷ್ಠ ಸಂತರಾದರು.
ಅವರ ಪ್ರತಿಮೆಗಳು ನಾಡಿನಾದ್ಯಂತ ಭಕ್ತಿಮಯವಾಗಿವೆ ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಕುಶಾಲನಗರದ ಡಾ.ಶಿವಕುಮಾರ ಸ್ವಾಮೀಜಿ ವೃತ್ತಕ್ಕೆ ಗುರುವಾರ ಭೇಟಿ ನೀಡಿ ಶ್ರೀಗಳ ಪಾದಗಳಿಗೆ ಪುಷ್ಪ ನಮನ ಸಲ್ಲಿಸಿದ ಶ್ರೀಗಳು ನೆರೆದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಅವರು,
ಕುಶಾಲನಗರದಲ್ಲೂ ಭಕ್ತ ಸಮದಾಯ ಶ್ರೀಗಳ ಹೆಸರಿನಲ್ಲಿ ವೃತ್ತಿಗಳನ್ನು ನಿರ್ಮಾಣ ಮಾಡಿರುವುದು ಸಂತಸದ ಸಂಗತಿ ಎಂದರು.
ವಿರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ,
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ,
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹಕ್ಕೆ ಮೋಹನ್,
ಕುಶಾಲನಗರ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಸ್.ನಂದೀಶ್,
ಅಕ್ಕನ ಬಳಗದ ಅಧ್ಯಕ್ಷೆ ಕಮಲಮ್ಮ ಉದಯಕುಮಾರ್,
ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಸರೋಜಾ ಆರಾಧ್ಯ,
ಪುರಸಭೆ ಮಾಜಿ ಅಧ್ಯಕ್ಷ ಜಯವರ್ಧನ, ಎಂ.ಬಿ.ಸುರೇಶ್, ಮಮತಾ ಲಿಂಗರಾಜು, ಗೀತಾ ಪರಮೇಶ್, ಕವಿತಾ ಧನರಾಜು, ಬಿ.ಬಿ.ಲೋಕೇಶ್, ಲಿಂಗರಾಜು,
ಪ್ರಮುಖರಾದ ಶಿವಲಿಂಗು,ಎಸ್.ಎಸ್.ವಿರೂಪಾಕ್ಷ, ಬಿ.ನಟರಾಜು, ಕೆ.ಪಿ.ಪರಮೇಶ್, ಹುಲುಸೆ ಬಸವರಾಜು, ಎಂ.ಎಸ್.ಲೋಕೇಶ್, ಕೂಡುಮಂಗಳೂರು ಪ್ರಶಾಂತ್ ಇದ್ದರು.
ಬಸವೇಶ್ವರ ದೇವಾಲಯದ ಅರ್ಚಕ ಚಂದ್ರ ಶೇಖರ ಶಾಸ್ರ್ತಿ ಪೂಜಾ ವಿಧಿ ನೆರವೇರಿಸಿದರು.
ಶ್ರೀಗಳ ಭೇಟಿಯ ಹಿನ್ನೆಲೆಯಲ್ಲಿ ಶಿವಕುಮಾರ ಸ್ವಾಮೀಜಿ ವೃತ್ತವನ್ನು ತಳಿರು ತೋರಣಗಳಿಂದ ಆಲಂಕರಿಸಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!