ಕ್ರೈಂ

ಹೆಬ್ಬಾಲೆ ದೇವಾಲಯದಲ್ಲಿ ಕಳ್ಳತನ ಯತ್ನ

ಕುಶಾಲನಗರ, ನ 14 : ಸಮೀಪದ ಹೆಬ್ಬಾಲೆ ಹಾಗೂ ಶಿರಂಗಾಲ ಗ್ರಾಮದ ದೇವಸ್ಥಾನಗಳಲ್ಲಿ ಗುರುವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ.

ಹೆಬ್ಬಾಲೆ ಗ್ರಾಮದ ಶ್ರೀ. ಬನಶಂಕರಿ ದೇವಾಲಯ ಗರ್ಭಗುಡಿ ಬೀಗ ಮುರಿದು ಒಳನುಗ್ಹಿರುವ ಖದೀಮರು ದೇವಿಯ ವಿಗ್ರಹದಲ್ಲಿದ್ದ ಮೂರು ಚಿನ್ನದ ತಾಳಿ ಸರ ಹಾಗೂ ಬೆಳ್ಳಿ ಕಾಲು ಉಂಗುರವನ್ನು ಕಳ್ಳತನ ಮಾಡಿದ್ದಾರೆ.ಪಕ್ಕದ ಗಣೇಶ ದೇವಾಲಯಕ್ಕೂ ಕಳ್ಳರು ನುಗ್ಗಿದ್ದು,ಅಲ್ಲಿ ಏನು‌ ಸಿಗದೆ ವಾಪಸು ಆಗಿದ್ದಾರೆ. ಅದೇ ರೀತಿ ಶಿರಂಗಾಲ ಗ್ರಾಮದ ಶ್ರೀ ಮಂಟಿಗಮ್ಮ ದೇವಾಲಯ ಬೀಗ ಮುರಿದು ಒಳ್ಳ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ಹಣಕ್ಕಾಗಿ ಜಾಲಾಡಿದ್ದಾರೆ.ಆದರೆ ಅಲ್ಲಿ ಯಾವುದೇ ಬೆಲೆಬಾಳುವ ಆಭರಣ ಸಿಕ್ಕಿಲ್ಲ. ಅದೇ ಗ್ರಾಮದ ನೂತನ ವಿನಾಯಕ ದೇವಾಲಯಕ್ಕೆ ನುಗ್ಗಿ ಕಾಣಿಕೆ ಡಬ್ಬಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಕುಶಾಲನಗರ ಟೌನ್‌ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಸ್ವಾಮಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಡಿಕೇರಿಯಿಂದ ಶ್ವಾನದಳದ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಆದರೆ ಕಳ್ಳರ ಸುಳಿವು ಸಿಕ್ಕಿಲ್ಲ.
ಹೆಬ್ಬಾಲೆ ಬನಶಂಕರಿ ದೇವಾಲಯ ಸಮಿತಿ ಅಧ್ಯಕ್ಷ ಎಚ್.ಟಿ.ರಮೇಶ್ ಹಾಗೂ ಕಾರ್ಯದರ್ಶಿ ಎಚ್.ಟಿ.ಸೋಮಣ್ಣ ಮಾತನಾಡಿ, ಬನಶಂಕರಿ ದೇವಾಲಯ ಗರ್ಭ ಬೀಗ ಮುರಿದು ಕಳ್ಳರು ದೇವಿಯ ವಿಗ್ರಹಕ್ಕೆ ಹಾಕಲಾಗಿದ್ದ ಮೂರು ಚಿನ್ನದ ತಾಳಿ ಹಾಗೂ ಬೆಳ್ಳಿ ಕಾಲು ಉಂಗುರವನ್ನು ದೋಚಿದ್ದಾರೆ.ಕಳೆದ ವಾರ ಕಾಣಿಕೆ ಡಬ್ಬಿ ತೆಗದು ಅದರಲ್ಲಿ ಹಣವನ್ನು ದೇವಾಲಯ ಸಮಿತಿ ಅವರು ತೆಗೆದುಕೊಂಡಿದ್ದರಿಂದ ಖಾಲಿ ಕಾಣಿಕೆ ಡಬ್ಬಿ ಯನ್ನು ಅಲ್ಲಿಯೆ ಬಿಟ್ಟು ಹೋಗಿದ್ದಾರೆ ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!