ಕುಶಾಲನಗರ, ಆ 06: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿನ್ನೂರು ಭಾಗದಲ್ಲಿರುವ ಕೆಮ್ಮಾರ ಹರೀಶ್ ರವರ ಪುತ್ರ ಕು. ಅನೀಶ್, & ಕೆಮ್ಮಾರನ ಅರ್ಚನ ರವರ ಪುತ್ರ ಕು. ಡೆಲ್ವಿನ್ ರವರು ನಂಜರಾಯಪಟ್ಟಣ ಗ್ರಾಮದ ಮೈದಾನಕ್ಕೆ ಬೈಕ್ ನಲ್ಲಿ ತೆರಳುತ್ತಿರುವಾಗ ಚಿನ್ನೂರು ಭಾಗದ ತೋಟದಿಂದ ಕಾಡಾನೆ ದಾಳಿ ನಡೆಸಿದ್ದು, ಅನೀಶ್ ಎಂಬಾತ ಕಾಡಾನೆಯಿಂದ ತಪ್ಪಿಸಿಕೊಂಡಿದ್ದು ಡೆಲ್ವಿನ್ ರವರ ಹಿಂಬದಿ ತಲೆಗೆ ಪೆಟ್ಟು ಬಿದ್ದಿರುತ್ತದೆ. ಹತ್ತಿರದಲ್ಲಿದ್ದ ಮೀನುಕೊಲ್ಲಿಯ ಅರಣ್ಯ ಇಲಾಖೆ ಅಧಿಕಾರಿಗಳು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಇಬ್ಬರು ಯುವಕರನ್ನು ತಕ್ಷಣ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿರುತ್ತಾರೆ. ವಿಷಯ ತಿಳಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಿ ಎಲ್ ವಿಶ್ವ ರವರು ಸದರಿ ರವರ ಮನೆಗೆ ಭೇಟಿ ಮಾಡಿದರು, ನಂತರ ಮೀನುಕೊಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿಗಳನ್ನು ಭೇಟಿ ಮಾಡಿ ಸದರಿ ವಿಚಾರದ ಬಗ್ಗೆ ಮಾತನಾಡಿ ಆನೆ ದಾಳಿಯಾದ ವ್ಯಕ್ತಿಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡುವಂತೆ ತಿಳಿಸಿದರು ಹಾಗೂ ನಂಜರಾಯಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಆನೆ ಕಂದಕ ಮಣ್ಣು ತುಂಬಿದ್ದು , ಮತ್ತು ಕಾಡಾನೆ ಉಪಟಳ ಇರುವ ಜಾಗದಲ್ಲಿ ಕಂದಕನ್ನು ನಿರ್ಮಾಣ ಮಾಡುವಂತೆ ತಿಳಿಸಿದರು ಹಾಗೂ ಕೆಲವು ಭಾಗಗಳಲ್ಲಿ ಸೋಲಾರ್ ತಂತಿ ಹಾಳಗಿದ್ದು. ಸರಿ ಪಡಿಸುವಂತೆ ತಿಳಿಸಿದರು.
Back to top button
error: Content is protected !!