ನಿಧನ

ದೇಹದಾನದ‌ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಶಾಲನಗರದ ಮಹಿಳೆ

ಕುಶಾಲನಗರ, ಫೆ 10: ದೇಹ ದಾನಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ಕುಶಾಲನಗರದ ಮಹಿಳೆಯೊಬ್ಬರು ಎಲ್ಲರಿಗೂ ಮಾದರಿಯಾಗಿದ್ದಾರೆ.

ಕೊಡಗು ಜಿಲ್ಲೆ ಕುಶಾಲನಗರ ಕರಿಯಪ್ಪ ಬಡಾವಣೆಯ ನಿವಾಸಿ ಲಲೀತ (67) ಮೃತ ಮಹಿಳೆಯಾಗಿದ್ದು ಕಳೆದ ಹಲವು ವರ್ಷಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ನಾನು ಸಾವನ್ನಪ್ಪಿದ್ರೆ ನನ್ನ ದೇಹವನ್ನ ದಾನ ಮಾಡೋದಾಗಿ ತಿಳಿಸಿದ್ರು. ಅದರಂತೆ  ಲಲೀತ ಅವರು ಇಂದು ದೈವಾಧಿನರಾಗಿದ್ದು ತಮ್ಮ ದೇಹವನ್ನ ಮಡಿಕೇರಿಯ ವೈದ್ಯಕೀಯ ಸಂಸ್ಥೆಗೆ ದಾನ ಮಾಡಿದ್ದರು. ಇವರ ಪತಿ ನಿವೃತ ಅರಣ ಇಲಾಖೆ ಅಧಿಕಾರಿಯಾಗಿದ್ದು ಮೃತ ಲಲಿತ ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನ ಅಗಲಿದ್ದಾರೆ. ಇನ್ನು ದುಃಖದ ವಿಷಯವೆಂದರೆ ಮಗನ ಮದುವೆ ದಿನವೇ ಇವರು ಕೊನೆಯುಸಿರೆಳೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!