ಕುಶಾಲನಗರ, ಜು 22: ಸುಳ್ಯದಲ್ಲಿ ಹತ್ಯೆಯಾದ ಮಸೂದ್ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ಮುಸ್ಲಿಂ ಒಕ್ಕೂಟಗಳ ಕೇಂದ್ರ ಸಮಿತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.
ಸಂಘಪರಿವಾರದ ಗೂಂಡಾಗಳಿಂದ ಮಸೂದ್ ಹತ್ಯೆಯಾಗಿದ್ದು ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮುಸ್ಲಿಂ ಒಕ್ಕೂಟಗಳ ಅಧ್ಯಕ್ಷ ಅಬ್ದುಲ್ ಕರೀಂ, ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾದ ಅಮಾಯಕ ಮಸೂದ್ ಕುಟುಂಬಕ್ಕೆ 25 ಲಕ್ಷ ರೂಗಳ ಪರಿಹಾರ ಒದಗಿಸುವುದರೊಂದಿಗೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕೊಡಗು ಜಿಲ್ಲೆಯಲ್ಲಿ ಕಾವೇರಿ ಮಾತೆ ಹಾಗೂ ಕೊಡವ ಯುವತಿಯರ ಬಗ್ಗೆ ಅವಹೇಳನ ಮಾಡಿದ ಪ್ರಕರಣ ಪತ್ತೆಹಚ್ಚಿ ನೈಜ ಆರೋಪಿಯನ್ನು ಬಂಧಿಸಿದ ಕೊಡಗು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಲಾಯಿತು.
ಪ್ರತಿಭಟನೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಅಶ್ರಫ್, ಕಾರ್ಯದರ್ಶಿ ಜಕ್ರಿಯಾ, ಸಹ ಕಾರ್ಯದರ್ಶಿ ಶರೀಫ್, ಖಜಾಂಚಿ ಇರ್ಫಾನ್, ಸದಸ್ಯರಾದ ಜಲೀಲ್, ಶರೀಫ್, ಅಶ್ರಫ್, ಅದ್ದು, ಅಬ್ದುಲ್, ಪಾಶ ಮತ್ತಿತರರು ಇದ್ದರು.
Back to top button
error: Content is protected !!